Monday 27 April 2015

ತಲಕಾಡಿನ ಶಿಲ್ಪ ವೈಭವ - ದ್ವಾರಪಾಲಕರು

   ಧಾರ್ಮಿಕವಾಗಿ, ಪುರಾಣೋಕ್ತವಾಗಿ,  ಐತಿಹಾಸಿಕವಾಗಿ, ರಾಜಕೀಯವಾಗಿ, ಸಾಹಿತ್ಯಕವಾಗಿ, ಕಲಾತ್ಮಕವಾಗಿ ಪ್ರಾಮುಖ್ಯತೆಯನ್ನು ಪಡೆದ ಪುಣ್ಯಭೂಮಿ ತಲಕಾಡು. ಪೂರ್ವದಲ್ಲಿ 30 ದೇವಾಲಯಗಳಿಂದ ಕೂಡಿದ ಭವ್ಯ ನಗರವಾಗಿತ್ತು. ಪ್ರಾಕೃತಿಕ ವಿಕೋಪದಿಂದಾಗಿ 16ನೇ ಶತಮಾನದಲ್ಲಿ ಬಹುತೇಕ ತಲಕಾಡು ಭಾಗ ಮರಳಿನಲ್ಲಿ ಮುಚ್ಚಿ ಹೋಯಿತು. ಈಗಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಖ್ಯಾತವಾದ ದೇಗುಲವೆಂದರೆ ವೈದ್ಯನಾಥ ಸ್ವಾಮಿ ದೇವಸ್ಥಾನ. ಇದನ್ನು ಮಾಧವ ಮಂತ್ರಿ ಕಟ್ಟಿಸಿದನೆಂದು ಪ್ರತೀತಿ ಇದೆ.
    ಈ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು ಮುಖ್ಯದ್ವಾರದ ಇಕ್ಕೆಲಗಳಲ್ಲಿ ಸುಂದರ ಕೆತ್ತನೆಯ ೧೦ ಅಡಿ ಎತ್ತರದ ದ್ವಾರಪಾಲರ ಮೂರ್ತಿಗಳಿವೆ. ಇಷ್ಟು ಎತ್ತರವಾದ ದ್ವಾರಪಾಲಕ ಮೂರ್ತಿಗಳನ್ನು ಮತ್ತಾವ ದೇವಾಲಯದಲ್ಲೂ ನಾವು ಕಾಣುವುದಿಲ್ಲ.
                              
  ದ್ವಾರಪಾಲಕರಲ್ಲಿ ನಂದಿ ದೇವಗಣಕ್ಕೆ ಸಂಬಂಧಿಸಿದವನಾದರೆ, ಮಹಾಕಾಳ ರಾಕ್ಷಸಗಣದವನಾಗಿದ್ದಾನೆ. ವಿಗ್ರಹದ ಪ್ರತಿ ಬೆರಳುಗಳು, ಅದರಲ್ಲಿ ಹಾಕಿಕೊಂಡಿರುವ ಉಂಗುರಗಳನ್ನು ಬಲು ಸೂಕ್ಷ್ಮವಾಗಿ ಕೆತ್ತಲಾಗಿದೆ.  ಹೊಟ್ಟೆಯಿಂದ ಎದೆಯ ಭಾಗದವರೆಗೆ ಸೂಕ್ಷ್ಮವಾಗಿ ಗಮನಿಸಿದಾಗ ನಂದಿಯ ಮುಖವು ಗೋಚರಿಸುತ್ತದೆ.
ಕೈಬೆರಳುಗಳು 
       
                       ನಂದಿಯ ಮುಖದಂತೆ ಕಾಣುವ ಎದೆ ಮತ್ತು ಹೊಟ್ಟೆಯ ಭಾಗ
      
     ಭಾಷಾ ಕೌಶಲ್ಯವನ್ನು ಬೆಳೆಸಲು ಕನ್ನಡ ಪ್ರಥಮಭಾಷೆ ಎಂಟನೆಯ ತರಗತಿಯ ‘ತಲಕಾಡಿನ ವೈಭವ’ ಗದ್ಯ ಭಾಗಕ್ಕೆ ಸಂಬಂಧಿಸಿದಂತೆ ನೀಡ ಬಹುದಾದ ಚಟುವಟಿಕೆಗಳು.
ತಲಕಾಡಿನ ಸುಪ್ರಸಿದ್ಧವಾದ ದೇವಾಲಯಗಳಾವುವು?
ವೈದ್ಯನಾಥೇಶ್ವರ ದೇವಾಲಯದಲ್ಲಿರುವ ದ್ವಾರಪಾಲಕರ ವೈಶಿಷ್ಟ್ಯವೇನು?
ತಲಕಾಡಿನ ಬಹುಭಾಗ ಮರಳಿನಿಂದ ಮುಚ್ಚಿಹೋಗಲು ಕಾರಣವೇನು?
ವೈದ್ಯನಾಥೇಶ್ವರ ದೇವಾಲಯದ ದ್ವಾರಪಾಲಕರ ಶಿಲ್ಪನ್ನು ನೋಡಿ ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
ತಲಕಾಡನ್ನು ದೇವಾಲಯಗಳ ನಗರಿ ಎಂದು ಏಕೆ ಕರೆಯುತ್ತಾರೆ?
ವೈದ್ಯನಾಥೇಶ್ವರ ದೇವಾಲಯದ ದ್ವಾರಪಾಲಕರ ಎದೆಯ ಭಾಗವನ್ನು ವೀಕ್ಷಿಸಿದಾಗ ಕಂಡುಬರುವ ಕೌತುಕವೇನು?



No comments:

Post a Comment