Sunday 17 January 2016

ಕಷ್ಟ ಕಾರ್ಪಣ್ಯ ಯಾರನೂ ಬಿಡವು

ನಿರರ್ಥರಾಜನಾ ಪುತ್ರಿ ದಮ ಮುನಿಯ ವರ ಪ್ರಸಾದ
ನಿಷಧದೇಶದೊಡೆಯ ನಳಮಹಾರಾಜನ ಧರ್ಮಪತ್ನಿ
ದಮಯಂತಿ ಕಲಿಯ ದೆಸೆಯಿಂ ಕಾಡುಪಾಲಾದಳಲಾ
ಕಷ್ಟ ಕಾರ್ಪಣ್ಯಗಳು ಯಾರನೂ ಬಿಡವು-ನನಕಂದ||

Friday 1 January 2016

ಜನ'ವರಿ’

ಜನ'ವರಿ’ ಮಾಡಲಿ ಮಾಡದಿರಲಿ ಅದರ ಪರಿವೆಯಿಲ್ಲದೆ
ಜನವರಿ ಮರಳಿ ಮರಳಿ ಪ್ರತಿ ವರುಷ ಬಿಡದೆ ಬರುತಿದೆ
ಜನ(ರ)’ವರಿ’ಯ ಕಳೆದು ಹರುಷದಾ ಹೊನಲ ಹರಿಸಲು
ಜನ(ಕೆ)’ವರಿ’ಯಾಗದಂತೆಲ್ಲನಿರಿಸಲು – ನನಕಂದ||