Wednesday 25 September 2019

ಮೊದಲನೆಯ ಸಂಕಲನಾತ್ಮಕ ಮೌಲ್ಯಮಾಪನ ತೃತೀಯ ಭಾಷೆ ಕನ್ನಡ


ಮೊದಲನೆಯ ಸಂಕಲನಾತ್ಮಕ ಮೌಲ್ಯಮಾಪನ
ಹತ್ತನೆಯ ತರಗತಿ

ವಿಷಯ: ತೃತೀಯ ಭಾಷೆ ಕನ್ನಡ                                                                   ವಿಷಯ ಸಂಕೇತ: 62K
ಅವಧಿ : 2-30 ಗಂಟೆಗಳು                                                             ಗರಿಷ್ಠ ಅಂಕಗಳು:80                      
ಸೂಚನೆಗಳು :  
ಉತ್ತರಗಳು ನೇರವೂ, ಸ್ಪಷ್ಟವೂ ಆಗಿದ್ದು, ಅಂಕಗಳಿಗೆ ತಕ್ಕಂತೆ ವಿಸ್ತಾರವಿರಲಿ.
ವಸ್ತುನಿಷ್ಠ ಪ್ರಶ್ನೆಗಳಿಗೆ, ಹೊಡೆದು, ಅಳಿಸಿ, ಕೆರೆದು ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
ಪೆನ್ಸಿಲ್ ಬಳಸಿ ಬರೆದ ಉತ್ತರಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸುವುದಿಲ್ಲ.
 I. ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ.                                          08X1=08
1. ಅನುನಾಸಿಕಾಕ್ಷರಗಳಿಂದ ಮಾತ್ರ ಕೂಡಿರುವ ಪದ :     
(ಎ)  ಮದನ                                   (ಬಿ) ಕವನ                  
(ಸಿ)  ನಯನ                                  (ಡಿ) ಮನನ
2. ಉಪಮಾನವೇ ಉಪಮೇಯವೆಂದು ರೂಪಿಸಿ, ಅವೆರಡೂ ಒಂದೇ ಎಂದು ಹೇಳುವ ಅಲಂಕಾರ :
 (ಎ) ಯಮಕ                                  (ಬಿ) ರೂಪಕ
 (ಸಿ) ಉಪಮ                                  (ಡಿ) ಶಬ್ದಾಲಂಕಾರ
3.ಅಭಿಪ್ರಾಯದ ವಿವರಣೆ ಇಂತಿದೆ ಎನ್ನುವುದನ್ನು ತಿಳಿಸುವ ಸಂದರ್ಭದಲ್ಲಿ ಬಳಸುವ ಚಿಹ್ನೆ :   
(ಎ) ವಿವರಣಾತ್ಮಕ                            (ಬಿ) ಅಲ್ಪವಿರಾಮ                 
(ಸಿ) ವಾಕ್ಯವೇಷ್ಟನ                            (ಡಿ) ಆವರಣ
4.ತೃತೀಯಾ ವಿಭಕ್ತಿ ಪ್ರತ್ಯಯ :        
 (ಎ)                                           (ಬಿ) ಅನ್ನು
 (ಸಿ)  ಇಂದ                                   (ಡಿ) ದೆಸೆಯಿಂದ
5. ಮಿಶ್ರವಾಕ್ಯ ವಾಕ್ಯಕ್ಕೆ ಉದಾಹರಣೆ :
(ಎ) ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ.      
(ಬಿ) ಶಾಲೆಗೆ ಹೊಸಪುಸ್ತಕಗಳನ್ನು ತಂದಿರುವುದನ್ನು ತಿಳಿದು ವಿದ್ಯಾರ್ಥಿಗಳು ಸಂತಸಪಟ್ಟರು
(ಸಿ) ಮಕ್ಕಳು ಆಡಲು ಬಯಸುತ್ತಾರೆ, ಆದರೆ ಆಡಲು ಮೈದಾನವಿಲ್ಲ.
(ಡಿ) ವಿದ್ಯಾರ್ಥಿಗಳು ಓದಲು ಬಯಸಿದರೂ ಸಾಕಷ್ಟು ಅವಕಾಶಗಳಿಲ್ಲ.
6. ಕೊಡಗಿನ ಗೌರಮ್ಮನವರ ಪತಿಯ ಹೆಸರು :
(ಎ) ಬಿ. ಟಿ. ಗೋಪಾಲಕೃಷ್ಣಯ್ಯ         (ಬಿ) ಜಿ. ಎಂ ಮಂಜುನಾಥಯ್ಯ
(ಸಿ) ಎನ್. ಎಸ್. ರಾಮಯ್ಯ                (ಡಿ) ಗುಡಿಗೇರಿ ಕುಲಕರ್ಣಿ
7. ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿರು :   
(ಎ) ಶರೀಫರು                                 (ಬಿ) ಸಿಪಿಕೆ
(ಸಿ) ಕುವೆಂಪು                                 (ಡಿ) ನಿಸಾರ್ ಅಹಮದ್
8.‘ತಾನುಎನ್ನುವ ಸರ್ವನಾಮವು :
ಎ) ಆತ್ಮಾರ್ಥಕ                                (ಬಿ) ಪ್ರಶ್ನಾರ್ಥಕ
(ಸಿ) ಪುರುಷಾರ್ಥಕ                            (ಡಿ) ವಸ್ತುವಾಚಕ
II. ಕೆಳಗಿನ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು ಬರೆಯಿರಿ.                                                                     04X1=04
 9. ಶಿಶುನಾಳದ ಸಂತ : ಶರೀಫರು : : ಹುಲಗೂರಿನ ಸಂತ : ----
10. ವ್ಯವಸಾಯ : ಬೇಸಾಯ : : ವರ್ಷ : ----
11. ಚರ್ಚ್ : ಶಿಲುಬೆ : : ದೇವಾಲಯ : ----
12. ಮಗು : ಮಕ್ಕಳು : : ಕವಿ : ----
III.  ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.                                      04X 01=04
13. ಮಿನಿ ಪೊಲೀಸ್ ನಗದಲ್ಲಿ ದಾರಿ ತಪ್ಪಿ ಅಲೆಯುತ್ತಿದ್ದ ಲೇಖಕರ ಕಣ್ಣಿಗೆ ಕಂಡವರು ಯಾರು?
14. ವಿಶ್ವರೂಪಾವಲೋಕನಕ್ಕೆ ತತ್ತರಿಸಿದವರು ಯಾರು?
15. ‘ಸೋಮೇಶ್ವರ ಶತಕದಲ್ಲಿ ಹೇಳಿರುವಂತೆ ಮಗನಲ್ಲಿ ಇರಬೇಕಾದ ಗುಣಯಾವುದು?
16. ಪುಲಿಗೆರೆ ಸೋಮನಾಥನು ಹೇಳಿರುವಂತೆ ರಾಜನಾಗುವವನಿಗೆ ಯಾವ ಗುಣವಿರಬೇಕು?
IV. ಕೆಳಗಿನ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                             08X 02=16
17. ಗೊರೂರರು ಒಂದು ರಾತ್ರಿಯನ್ನು ಲಾಕಪ್ಪಿನಲ್ಲಿ ಕಳೆಯ ಬೇಕಾಯಿತು ಏಕೆ?
18. ಶರೀಫರು ತಮಗಾದ ದುಃಖವನ್ನು ಹೇಗೆ ಕಡಿಮೆ ಮಾಡಿಕೊಂಡರು?
19. ಕೊಡಗಿನ ಗೌರಮ್ಮನವರ ಕೌಟುಂಬಿಕ ಜೀವನವನ್ನು ಕುರಿತು ಬರೆಯಿರಿ.
20. ಕೊಡಗಿನ ಗೌರಮ್ಮನವರು ಕಲಿತ ವಿದ್ಯೆಯೇ ಅವರ ಮರಣಕ್ಕೆ ಹೇಗೆ ಕಾರಣವಾಯಿತು?
21. ಮನುಷ್ಯರ ನಡುವಿನ ವೈಮನಸ್ಸನ್ನು ತೊಡೆದು ಹಾಕುವ ಕನಸು `ಕಟ್ಟತೇವ ನಾವುಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ?
22. ‘ಹಿರಿಬಾಳುಗಳ ಪಳೆಯುಳಿಕೆಎಂದು ಕವಿಯು ಯಾವುದನ್ನು ಕರೆದಿದ್ದಾರೆ ಏಕೆ?
23. ತಮ್ಮ ಅಹಂಕಾರವನ್ನು ನುಚ್ಚು ನೂರಾಗಿಸಿದÀ ಸನ್ನಿವೇಶವನ್ನು ಕವಿಯು ಹೇಗೆ ವ್ಯಕ್ತಪಡಿಸಿದ್ದಾರೆ?
24. ಈರಪ್ಪ. ಎಂ. ಕಂಬಳಿಯವರು ಕೆಂಪುಬಸ್ಸನ್ನು ನೆಚ್ಚಿದ್ದರಿಂದ ಇಡೀದಿನವನ್ನು ವ್ಯಯಿಸಬೇಕಾಯಿತು ಏಕೆÉ?
V. ಕೆಳಗಿನ ವಾಕ್ಯ ಅಥವಾ ಹೇಳಿಕೆಗಳಿಗೆ ಸಂದರ್ಭದೊಡನೆ ಸ್ವಾರಸ್ಯವನ್ನು ಬರೆಯಿರಿ.             02X03=06
25. “ಶರಣರ ಸಾವು ಮರಣದಲ್ಲಿ ನೋಡು
26. “ಕಂಡ ಕನಸುಗಳ ಕಟ್ಟೇ ಕಟ್ಟತೇವ    
VI. ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                                   04X03=12
27. ಮಿನಿಪೆÇಲೀಸ್ ನಗರದಲ್ಲಿ ಗೊರೂರರು ತಪ್ಪಿಸಿಕೊಂಡ ಪ್ರಕರಣವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
28. ಗೋವಿಂದಭಟ್ಟರ ಗುಣ ಸ್ವಭಾವಗಳನ್ನು ವಿವರಿಸಿರಿ.
29.  ಗ್ರಂಥಾಲಯದ ಬಗ್ಗೆ ಸಿಪಿಕೆಯವರು ವ್ಯಕ್ತಪಡಿಸಿರುವ ಭಾವನೆಗಳನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
30. “ನಾವೆಲ್ಲರೂ ಒಂದೇ ಎಂಬ ಕವಿಯ ಆಶಯವನ್ನು ಎಲ್ಲರೂ ಏಕೆ ಮೆಚ್ಚುವಂತಹದುಈ ಮಾತನ್ನು ವಿವರಿಸಿರಿ.
VII.  ಕೆಳಗಿನ ಕವಿ/ಸಾಹಿತಿಗಳ ಸ್ಥಳ, ಕಾಲ, ಕೃತಿಗಳನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ.        02X03=06
31. ಗೊರೂರು ರಾಮಸ್ವಾಮಿ ಅಯ್ಯಂಗಾರ್.
32. ಸತೀಶ ಕುಲಕರ್ಣಿ ಸಿ. ಪಿ.
VIII. ಕೆಳಗಿನ ಗಾದೆಯನ್ನು ವಿಸ್ತರಿಸಿ ಬರೆಯಿರಿ.                                                        01X03=03
33. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
                       ಅಥವಾ
   ಉಪ್ಪು ತಿಂದವನು ನೀರು ಕುಡಿಯಲೇ ಬೇಕು
IX. ಕೆಳಗಿನ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                                      01X 04=04
34. ಕೊಡಗಿನ ಗೌರಮ್ಮನವರ ಸಾಹಿತ್ಯ ಸೃಷ್ಟಿಗೆ ಪೂರಕ ಮತ್ತು ಪ್ರೇರಕವಾದ ವಿಚಾರಗಳಾವುವು? ವಿವರಿಸಿರಿ.
ಅಥವಾ
   ಗಾಂಧೀಜಿಯವರು ಕೊಡಗಿನ ಗೌರಮ್ಮನವರನ್ನು ಮೆಚ್ಚಿಕೊಂಡ ಸನ್ನಿವೇಶವನ್ನು ಕುರಿತು ಬರೆಯಿರಿ.
X.  ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ ಬರೆಯಿರಿ.                                                 01X 04=04
35.        ನಾವು-------------ಇವರು
-------------------
ಭೂಮಿ -------------
---------------ಇಂದೆ
ಅಥವಾ
ಆಂಗ್ಲ ---------------
-------------------
------ರಾಗಿ----------
--------------- ಒಂದೆ
XI. ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.                  01X 04=04
ಮಹೇಶ ಮತ್ತು ಸುರೇಶ ಎಂಬ ಇಬ್ಬರು ವಿದ್ಯಾರ್ಥಿಗಳು ಜಗದ್ಗುರುವಿನ ಬಳಿಗೆ ಬಂದು 'ಗುರುಗಳೇ, ನಮಗೆ ನಿಮ್ಮ ಆಶೀರ್ವಾದ ಬೇಕು' ಎಂದು ಹೇಳಿ ತಲೆ ಬಾಗಿದರು. ಜಗದ್ಗುರು ಅವರಿಬ್ಬರನ್ನೂ ಒಂದು ಕ್ಷಣ ತದೇಕ ಚಿತ್ತದಿಂದ ನೋಡಿ ಮಹೇಶನಿಗೆ 'ನೀನು ಅತ್ಯಂತ ಬುದ್ಧಿವಂತ ಒಳ್ಳೆಯ ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿಪಾಸಾಗುವೆ' ಎಂದು ಮಹೇಶನಿಗೂ, ‘ಬುದ್ಧಿವಂತಿಕೆ ಕಡಿಮೆ ಇರುವ ನೀನು ಪರೀಕ್ಷೆಯಲ್ಲಿಫೇಲಾಗುವೆ' ಎಂದು ಸುರೇಶನಿಗೂ ಹೇಳಿದರು. ಇದರಿಂದ ಖುಷಿಗೊಂಡ ಮಹೇಶ ಓದುವುದನ್ನು ಬಿಟ್ಟ. ಗುರುಗಳ ಮಾತನ್ನೇ ನಂಬಿ ಆರಾಮವಾಗಿ ಆಟವಾಡಿಕೊಂಡು ಓದುವುದನ್ನು ಮರೆತು ಸೋಮಾರಿಯಾದನು. ಸುರೇಶ ಜಗದ್ಗುರುವಿನ ಮಾತನ್ನು ಸುಳ್ಳು ಮಾಡಲು ನಿರ್ಧರಿಸಿದನು. ತನ್ನ ಓದಿನ ಮೇಲೆ ನಂಬಿಕೆಯಿಟ್ಟು ಸತತವಾಗಿ ಹಗಲು ರಾತ್ರಿಯೆನ್ನದೆ ಏಕಾಗ್ರತೆಯಿಂದ ಚೆನ್ನಾಗಿ ಓದಿದನು. ಮಹೇಶನು ಅತ್ಯಂತ ಕಡಿಮೆ ಅಂಕ ಪಡೆದು ಫೇಲಾಗಿದ್ದನು. ಸುರೇಶನು ಅತ್ಯಂತ ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದನು.
ಕುಪಿತಗೊಂಡ ಮಹೇಶ ಸರಸರನೆ ಆಶ್ರಮಕ್ಕೆ ಹೋಗಿ ಜಗದ್ಗುರುವಿಗೆ ನಿಮ್ಮ ಮಾತನ್ನು ನಂಬಿ ನಾನು ಕೆಟ್ಟೆ. ನಮ್ಮಿಬ್ಬರ ವಿಷಯದಲ್ಲಿ ನೀವು ಹೇಳಿದ ಮಾತು ಸುಳ್ಳಾಯಿತು. ಏಕೆ ಹೀಗಾಯಿತು?' ಎಂದು ಬೇಸರ ವ್ಯಕ್ತಪಡಿಸಿದನು.
ಆಗ ಜಗದ್ಗುರು ಸಾವಧಾನದಿಂದ 'ನೀನು ನನ್ನ ಮಾತನ್ನು ಮಾತ್ರ ನಂಬಿ ನಿನ್ನ ಪ್ರಯತ್ನ ಮಾಡಲೇ ಇಲ್ಲ. ಶಕ್ತಿಯಿದ್ದೂ ಶಕ್ತಿಹೀನನಾದೆ. ಪ್ರಯತ್ನವಿಲ್ಲದೆ ಎಂದೂ ಫಲ ದೊರೆಯದು. ಸುರೇಶ ತನ್ನ ಪ್ರಯತ್ನದ ಮೇಲೆ ನಂಬಿಕೆಯಿಟ್ಟು ಸತತವಾಗಿ ಕಷ್ಟಪಟ್ಟು ಓದಿದನು. ಅವನು ನಿನ್ನಷ್ಟು ಬುದ್ಧಿವಂತನಲ್ಲದಿದ್ದರೂ ಪ್ರಯತ್ನಪಟ್ಟು ಅಧ್ಯಯನ ಮಾಡಿದ್ದನು ಉತ್ತಮ ಫಲಿತಾಂಶ ಬಂತು. ಕಷ್ಟಪಟ್ಟರೆ ಫಲ ಸಿಕ್ಕೇ ಸಿಗುತ್ತದೆಂಬ ಮಾತನ್ನು ಆತ ನಿಜ ಮಾಡಿದ್ದಾನೆ' ಎಂದರು. ಯಾರ ಆಶೀರ್ವಾದ ಎಷ್ಟೇ ದೊಡ್ಡದಿದ್ದರೂ ನಮ್ಮ ಪ್ರಯತ್ನವಿಲ್ಲದಿದ್ದರೆ ಅದರಿಂದ ಏನೂ ಪ್ರಯೋಜನವಾಗದು. ದೇವರೇ ನಮ್ಮ ಪರವಾಗಿದ್ದರೂ ಪ್ರಯತ್ನವಿಲ್ಲದೆ ಫಲ ಸಿಗದು.  
36. ಪ್ರಶ್ನೆಗಳು :
1. ಮಹೇಶ ಮತ್ತು ಸುರೇಶನಿಗೆ ಗುರುಗಳು ಏನೆಂದು ಹೇಳಿದರು?
2. ಸುರೇಶನು ಗುರುಗಳ ಮಾತನ್ನು ಹೇಗೆ ಹುಸಿಗೊಳಿಸಿದನು?
3. ಮಹೇಶನು ಏಕೆ ಬೇಸರಗೊಂಡನು?
4. ಈ ಕತೆಯಿಂದ ತಿಳಿದು ಬರುವ ನೀತಿ ಏನು?
XII. ಕೆಳಗಿನ ವಿಷಯವನ್ನು ಕುರಿತು ಹತ್ತು ವಾಕ್ಯಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ.                          01X 04=04
37. ಭ್ರಷ್ಟಾಚಾರ ನಿರ್ಮೂಲನೆ
           ಅಥವಾ
       ಕ್ರೀಡೆಗಳ ಮಹತ್ವ
XIII. ಕೆಳಗಿನ ಸೂಚನೆಗೆ ಅನುಗುಣವಾಗಿ ಪತ್ರವನ್ನು ಬರೆಯಿರಿ.                                                                              01X 05=05
38.ನಿಮ್ಮನ್ನು ಸದಾಶಿವ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಪೂಜಾ ಎಂದು ಭಾವಿಸಿಕೊಂಡು ಪ್ರತಿಭಾ ಕಾರಂಜಿಯಬಗೆಗೆ ತಿಳಿಸುತ್ತಾ ಶಿವಮೊಗ್ಗದ ವಿನೋಬ ನಗರ ನಿವಾಸಿಯಾದ ನಿಮ್ಮ ತಂದೆಯವರಿಗೆ ಒಂದು ಪತ್ರ ಬರೆಯಿರಿ.    
ಅಥವಾ
ನಿಮ್ಮನ್ನು ಹೊಸನಗರದ ನಿವಾಸಿ ಶ್ರೇಯ ಎಂದು ಭಾವಿಸಿಕೊಂಡು, ನಿಮ್ಮ ಬಡಾವಣೆಯಲ್ಲಿ ಗ್ರಂಥಾಲಯವನ್ನು ತೆರೆಯುವಂತೆ ಪುರಸಭಾ ಅಧ್ಯಕ್ಷರಿಗೆ ಒಂದು ಪತ್ರವನ್ನು ಬರೆಯಿರಿ.
**********************


Saturday 17 August 2019

ಲಂಡನ್ ನಗರ


1. ಲಂಡನ್ ನಗರಗದ್ಯಭಾಗವು ಯಾವ ಸಾಹಿತ್ಯ ಪ್ರಕಾರಕ್ಕೆ ಉದಾಹಣೆಯಾಗಿದೆ?
2. ಲಂಡನ್ ನಗರಗದ್ಯಭಾಗದ ಕರ್ತೃಯಾರು?
3. ಲಂಡನ್ ನಗರಗದ್ಯಭಾಗದ ಆಕರಕೃತಿಯಾವುದು?
4. ಸಾಂಸ್ಕೃತಿಕವಾಗಿ ಶ್ರೀಮಂತನಾಗಿರುವ ವ್ಯಕ್ತಿ ಎಲ್ಲಿದ್ದರೂ ಯಾವರೀತಿ ನಡೆದುಕೊಳ್ಳುತ್ತಾನೆ?
5. ಟ್ರಾಮ್ಎಂದರೇನು?
6. ಟ್ರಾಮ್ ಬಸ್ಸುಗಳಿಗೆ ಸಕಾಲಕ್ಕೆ ಹೋಗುವುದಾಗುವುದಿಲ್ಲ ಏಕೆ?
7. ಪ್ರವಾಸದಿಂದ ಆಗುವ ಪ್ರಯೋಜನಗಳನ್ನು ಪಟ್ಟಿಮಾಡಿರಿ.
8. ಲಂಡನ್ ನಗರದಲ್ಲಿ ಗಾಡಿಗಳು ಭೂಗರ್ಭದಲ್ಲಿ ಚಲಿಸುವಂತೆ ವ್ಯವಸ್ಥೆಮಾಡಿದ್ದಾರೆ ಏಕೆ?
9. ಎಸ್ಕೆಲೇಟರ್ ಎಂದರೇನು?
10. ಎಸ್ಕೆಲೇಟರ್‍ಗಳನ್ನು ಏಕೆ ಮಾಡಿದ್ದಾರೆ?
11. ಲೇಖಕರು ಲಂಡನ್ ನಗರದಲ್ಲಿ ಯಾವುದನ್ನು ವಿಚಿತ್ರ ಸೃಷ್ಟಿ ಎಂದಿದ್ದಾರೆ?
12. ವೂಲವರ್ಥಎಂದರೇನು?
13. ಸಿಂಪಿಗಳು ಎಂದರೆ ಯಾರು?
14. ಲಂಡನ್ನಿನಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದ ಸಿಂಪಿಗಳು ಯಾರು ಯಾರು?
15. ಅಮ್ಮಣ್ಣಿಗಳೆಂದರೆ ಯಾರು?
16. ಹೆಣ್ಣು ಮಕ್ಕಳ ಬಗೆಗೆ ಆಂಗ್ಲರ ಅಭಿಪ್ರಾಯವೇನು?
17. ಚೇರಿಂಗ್ ಕ್ರಾಸ್ಎಂದರೇನು?
18. ಲಂಡನ್ನಿನಲ್ಲಿ ಇಂಡಿಯಾ ಆಫೀಸು ಎಲ್ಲಿದೆ?
19. ಆಂಗ್ಲರ ಸಾಮ್ರಾಜ್ಯ ವೈಭವವು ಎಲ್ಲಿ ಕಂಡುಬರುತ್ತಿತ್ತು?
20. ಟ್ರಾಫಲ್ಗಾರ್ ಸ್ಕ್ವೇರ್ ಎಂಬಲ್ಲಿ ಇರುವ ಶಿಲಾಮೂರ್ತಿಯಾವುದು?
21. ನೆಲ್ಸನ್ನನ ಶಿಲಾಮೂರ್ತಿ ಎಲ್ಲಿದೆ?
22. ಗೋಕಾಕರು ಲಂಡನ್ನಿ ಮೂಲೆಮೂಲೆಯಲ್ಲಿರುವ ಶಿಲಾಮೂರ್ತಿಗಳು ಏನೆಂದು ಹೇಳುತ್ತಿರುವಂತೆ ತೋರುತ್ತಿದೆ ಎಂದಿದ್ದಾರೆ?
23. ವೆಲಿಂಗ್ಟನ್ನನ ಶಿಲಾಮೂರ್ತಿ ಎಲ್ಲಿದೆ?
24. ವಿದೇಶದಲ್ಲಿ ಅಕ್ಷರಶಃ ನಿಜವಾಗಿರುವುದು ಯಾವುದೆಂದು ಗೋಕಾಕರು ಹೇಳಿದ್ದಾರೆ?
25. ಗೋಕಾಕರು ಹೆಣ್ಣುಮಕ್ಕಳ ಟೊಪ್ಟಿಗೆಯನ್ನು ಕುತೂಹಲದಿಂದ ನೋಡಿದ್ದೇಕೆ?
26. ಗೋಕಾಕರು ಮನುಷ್ಯರಂತೆ ಟೊಪ್ಪಿಗೆಯಲ್ಲವೆ? ಎಂದಿದ್ದಾರೇಕೆ?
27. ಗೋಕಾಕರಿಗೆ ನೆನಪಿಗೆ ಬಂದ ಬೇಕನ್ನರ ಮಾತು ಯಾವುದು?
28. ವೆಸ್ಟ್ ಮಿನ್‍ಸ್ಟರ್ ಅಬೆಎಂದರೇನು?
29. ಸಾವಿರ ವರ್ಷದಷ್ಟು ಪುರಾತನವಾದ ಲಂಡನ್ನಿನಲ್ಲಿರುವ ಪ್ರಾರ್ಥನಾ ಮಂದಿರ ಯಾವುದು?
30. ‘ಸರಕಾರಿ ವೈದಿಕರುಎಂದರೆ ಯಾರು?
31. ಸರಕಾರಿ ವೈದಿಕರ ಕೆಲಸವೇನು?
32. ಗೋಲ್ಡ್‍ಸ್ಮಿತ್ ಹಾಗು ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳು ಬರೆದಿರುವ ನಿಬಂಧನೆ ಯಾವುದು?
33. ಗೋಕಾಕರು ಹೇಳಿರುವಂತೆ ಇಂದಿಗೂ ಕಬ್ಬಿಗರ ಸ್ಫೂರ್ತಿಯ ತವರುಮನೆಯಾಗಿರುವುದು ಯಾವುದು?
34. ವೆಸ್ಟ್ ಮಿನ್‍ಸ್ಟರ್ ಅಬೆಯಲ್ಲಿ ಗೋಕಾಕರ ಕಣ್ಣಿಗೆ ಬಿದ್ದ ರಾಜಕಾರಣಚತುರರು ಯಾರು ಯಾರು?
35. ವೈಜ್ಞಾನಿಕರ ಮೂಲೆಯಲ್ಲಿ ಕಂಡು ಬರುವ ದೊಡ್ಡದಾದ ಶಿಲಾಮೂರ್ತಿಯಾವುದು?
36. ‘ಸ್ಟೋನ್ ಆಫ್ ಸ್ಕೋನ್ಎಂದರೇನು?
37. ಸ್ಟೋನ್ ಆಫ್ ಸ್ಕೋನ್ಎಲ್ಲಿದೆ?
38. ಮೂಲತಃ ಸ್ಟೋನ್ ಆಫ್ ಸ್ಕೋನ್ಎಲ್ಲಿತ್ತು?
39. ಲಂಡನ್ನಿಗೆ ಸ್ಟೋನ್ ಆಫ್ ಸ್ಕೋನ್ಅನ್ನು ತಂದವರು ಯಾರು?
40. ಸ್ಟೋನ್ ಆಫ್ ಸ್ಕೋನ್ನನ್ನು ಯಾವ ಸಂದರ್ಭದಲ್ಲಿ ಬಳಸಲಾಗುತ್ತದೆ?
41. ಪ್ರವಾಸವನ್ನು ಕುರಿತು ಬೇಕನ್ನನು ಆಡಿರುವ ಮಾತು ಯಾವುದು?
42. ಗೋಕಕರ ಮನಸ್ಸಿನಲ್ಲಿ ಮೂಡುವ ಷೇಕ್ಸ್‍ಪಿಯರನ ನುಡಿಯಾವುದು?
43. ಬೇಕನ್ನನ ಮಾತುಗಳು ಗೋಕಾಕರಿಗೆ ನೆನಪಾದುದೇಕೆ?
44. ಗೋಕಾಕರ ಕಾವ್ಯನಾಮ ಯಾವುದು?
45. ಗೋಕಾಕರ ಸ್ಥಳ ಯಾವುದು?
46. ಗೋಕಾಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿಯಾವುದು?
47. ಗೋಕಾಕರ ಸಮಗ್ರ ಸಾಹಿತ್ಯಕ್ಕೆ ಸಂದ ಪ್ರಶಸ್ತಿಯಾವುದು?
48. ಗೋಕಾಕರ ಪ್ರಮುಖ ಕೃತಿಗಳಾವುವು?
49. ಗೋಕಾಕರಿಗೆ ಸಂದ ಪ್ರಮುಖ ಪ್ರಶಸ್ತಿ ಹಾಗೂ ಪುರಸ್ಕಾರಗಳಾವುವು?
50. ಗೋಕಾಕರ ಪ್ರವಾಸ ಕಥನ ಯಾವುದು?
51. 34 ಒಂದನೇ ಜೇಮ್ಸ್ ಯಾರು?
52. 1564ರಲ್ಲಿ ಬ್ರಿಟನ್‍ನಲ್ಲಿ ಜನಿಸಿದ ಸುಪ್ರಸಿದ್ಧ ಇಂಗ್ಲಿμï ನಾಟಕಕಾರ ಯಾರು? 
53. ನೆಲ್ಸನನ ಪೂರ್ಣ ಹೆಸರೇನು?
54. ನೆಲ್ಸನ್ನು ಯಾವ ಯುದ್ಧದಲ್ಲಿ ಮಡಿದನು?
55. ನಾಲ್ಕುಸಾರಿ ಇಂಗ್ಲೆಡಿನ ಪ್ರಧಾನಿಯಾಗಿದ್ದ ಬ್ರಿಟಿμï ರಾಜತಂತ್ರಜ್ಞ ಯಾರು?
56. ಬ್ಯೂಮಾಂಟ್ ಯಾರು?
57. ಬೆನ್‍ಜಾನ್ಸನ್ ಯಾರು?
58. ವರ್ಡ್ಸ್ ವರ್ತ್ ಯಾರು?
59. ಗೋಲ್ಡ್‍ಸ್ಮಿತ್ ಯಾರು?
60. ಡಿಸ್ರೇಲಿ ಯಾರು?
61. ಕಿಪ್ಲಿಂಗ್ ಯಾರು?
62. ಡ್ರಯ್ಡನ್ ಯಾರು?
63. μರ್Éಲ್ ಯಾರು?
64. ಬ್ರಿಟನ್ನಿನ ರಾಷ್ಟ್ರಕವಿಯಾರು?
65. ನ್ಯೂಟನ್ ಸಾಧನೆಗಳಾವುವು?
66. ವಿಕಾಸವಾದದ ಮೂಲಪುರುಷ ಯಾರು?
67. ನಾಟಕಕಾರ ಮತ್ತು ಸಂಗೀತ ವಿದ್ವಾಂಸನೂ ಆಗಿದ್ದ ಇಂಗ್ಲೆಂಡಿನ ರಾಜ ಯಾರು?
68. ಮೂರನೇ ಎಡ್ವರ್ಡ್‍ನ ಕಾಲದಲ್ಲಿ ಯಾರ ನಡುವೆ ದೀರ್ಘಕಾಲದ ಯುದ್ಧ ಆರಂಭವಾಯಿತು?
69. ರಾಣಿ ಎಲಿಜಬೆತ್ ಸ್ಥಾಪಿಸಿದ ಕಂಪೆನಿ ಯಾವುದು?
70. ಪ್ರವಾಸದಿಂದ ಆಗುವ ಪ್ರಯೋಜನಗಳನ್ನು ಪಟ್ಟಿಮಾಡಿರಿ.
71. ಲಂಡನ್ ನಗರ ಗದ್ಯಭಾಗದ ಆಶಯವೇನು?
72. ಭೂಗರ್ಭದಲ್ಲಿ ಗಾಡಿಗಳನ್ನು ಒಯ್ಯುವ ವ್ಯವಸ್ಥೆಯನ್ನು ಲೇಖಕರು ವಿಚಿತ್ರ ಸೃಷ್ಟಿ ಎಂದಿದ್ದಾರೆ ಏಕೆ?
73. ವೂಲವರ್ಥವನ್ನು ಲೇಖಕರು ಮಹಾಕೋಶವೆಂದು ಏಕೆ ಕರೆದಿದ್ದಾರೆ?
74. ಲಂಡನ್ನಿನ ಸ್ಟೇಷನರಿ ಅಂಗಡಿಗಳ ವಿಶೇಷತೆಯನ್ನು ಗೋಕಾಕರು ಹೇಗೆ ವರ್ಣಿಸಿದ್ದಾರೆ?
75. ವೂಲವರ್ಥದಲ್ಲಿ ದೊರಕುವ ವಸ್ತುಗಳಾವುವು?
76. ಲಂಡನ್ನಿನಲ್ಲಿ ಗಂಡಿಗಿಂತ ಹೆಣ್ಣು ಹೆಚ್ಚಿದ್ದ ಹಾಗೆ ಕಾಣುತ್ತದೆ ಎಂಬ ಭಾವನೆ ಲೇಖಕರ ಮನಸ್ಸಿಗೆ ಬರಲು ಕಾರಣವೇನು?
77. ಚೇರಿಂಗ್ ಕ್ರಾಸ್ಸಾಮ್ರಾಜ್ಯದ ಬೀದಿ ಎಂದು ಏಕೆ ಕರೆದಿದ್ದಾರೆ?
78. ಲಂಡನ್ನಿನಲ್ಲಿದ್ದ ಇಂಡಿಯಾ ಆಫೀಸನ್ನು ಕುರಿತು ಗೋಕಾಕ್ ಅವರು ಆಡಿರುವ ಮಾತುಗಳಾವುವು?
79. ವೆಸ್ಟ್ ಮಿನ್‍ಸ್ಟರ್ ಅಬೆಯ ವೈಶಿಷ್ಟ್ಯವೇನು?
80. ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದೆಂಬ ಭಾವನೆ ಗೋಕಾಕರ ಮನದಲ್ಲಿ ಮೂಡಿದ್ದೇಕೆ?.
81. ಬ್ಯೂಮಾಂಟ್ ಎಂಬ ಕವಿಯು ಏನೆಂದು ಹಾಡಿದನು?
82. ರಾಜಕಾರಣಚತುರರೇ ಮೂಡಿದ ಭಾವನೆ ಯಾವುದು? ಆ ಬಾವನೆ ಬರಲು ಕಾರಣವೇನು?
83. ವೆಸ್ಟ್ ಮಿನ್‍ಸ್ಟರ್ ಅಬೆಯು ಇಂದಿಗೂ ಇದು ಕಬ್ಬಿಗರ ಸ್ಫೂರ್ತಿಯ ತವರುಮನೆಯಾಗಿz ಎಂದು ಲೇಖಕರು ಏಕೆ ಹೇಳಿದ್ದಾರೆ?
84. ವರ್ಡ್ಸ್ ವರ್ತ್ನ ಶಿಲಾ ಮೂರ್ತಿಯನ್ನು ಕಂಡಾಗ ಗೋಕಾಕರ ಮನಸ್ಸಿನಲ್ಲಿ ಮೂಡಿದ ಭಾವನೆಗಳಾವುವು?
85. ಗೋಕಾಕರು ರಾಜವಿಭಾಗ(ರಾಯಲ್ ಚಾಪೆಲ್)ಅನ್ನು ಕುರಿತು ಆಡಿರುವ ಮಾತುಗಳಾವುವು?
86. ಸ್ಟೋನ್ ಆಫ್ ಸ್ಕೋನ್ಅನ್ನು ಕುರಿತು ಗೋಕಾಕರು ಆಡಿರುವ ಮಾತುಗಳಾವುವು?                                    87. ‘ಸ್ಟೋನ್ ಆಫ್ ಸ್ಕೋನ್ವೈಶಿಷ್ಟ್ಯತೆಯೇನು?
87. ಕೆಳಗೆ ಕೊಟ್ಟಿರುವ ಸಂಧಿಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ತಿಳಿಸಿರಿ.
88. ಲಂಡನ್ ನಗರ ಗದ್ಯಭಾಗದಲ್ಲಿ ಬಂದಿರುವ ನುಡಿಗಟ್ಟುಗಳನ್ನು ಪಟ್ಟಿಮಾಡಿರಿ.
89. ಕೆಳಗಿನ ನುಡಿಗಟ್ಟುಗಳ ಅರ್ಥವನ್ನು ತಿಳಿಸಿರಿ
90. ಲಂಡನ್ ನಗರ ಗದ್ಯಭಾಗದಲ್ಲಿ ಬಂದಿರುವ ತತ್ಸಮ ತದ್ಭವ ಗಳನ್ನು ಪಟ್ಟಿಮಾಡಿರಿ.
91. ಈ ಕೆಳಗಿನ ಪದಗಳಿಗೆ ತತ್ಸಮ ತದ್ಬವಗಳನ್ನು ಬರೆಯಿರಿ.
   ಕವಿ, ಮುಖ, ಗವಿ, ಕಾವ್ಯ, ಪುಸ್ತಕ, ಅಡವಿ, ಯುದ್ಧ, ಅಕ್ಷರ, ವರ್ಷ, ಕಬ್ಬಿಗ, ಶೃಂಗರಿಸಿದ, ಆತ್ಮ, ರಾಜ, ಕೀರ್ತಿ, ಮೂರ್ತಿ, ಬಣ್ಣವನ್ನು, ವರ್ಣನೆ , ದೃಷ್ಟಿ, ಬಿಜ್ಜೆ, ಸಿಂಹದೆದೆಯ, ಸಹಜ.
92. ರೂಢ, ಅಂಕಿತ ಮತ್ತು ಅನ್ವರ್ಥನಾಮಗಳಾಗಿ ವಿಂಗಡಿಸಿರಿ.
   ಲಂಡನ್, ಪಟ್ಟಣ, ವ್ಯಾಪಾರಿ, ಗಾಡಿ, ಗವಿ, ಬಸ್ಸು, ವ್ಯಾಪಾ¬ರಿಗಳು, ವಾಸ್ತುಶಿಲ್ಪಿಗರು, ಸರದಾರರು, ಸೇನಾಪತಿ,
93. ದ್ವಿರುಕ್ತಿ, ಅನುಕರಣಾವ್ಯಯ, ನುಡಿಗಟ್ಟುಗಳನ್ನು ವಿಂಗಡಿಸಿ ಬರೆಯಿರಿ.
   ಧಡಧಡ, ನಡುನಡುವೆ, ವಿಧವಿಧ, ಬೀದಿಬೀದಿಗೆ ಮೂಲೆಮೂಲೆಗೆ, ಹೆಜ್ಜೆ ಹೆಜ್ಜೆ, ದುಡು ದುಡು, ನೆಲಕ್ಕುರುಳು, ಹೊತ್ತು! ಹೊತ್ತು!, ಒಮ್ಮೊಮ್ಮೆ, ಒಂದೊಂದು, ದಂಗುಬಡಿ, ಮನಗಾಣು, ಅಚ್ಚಳಿ, ನಿಟ್ಟಿಸಿ ನೋಡು, ಮೂಲೆಗೊತ್ತು, ದಿಕ್ಕುತಪ್ಪು.
94. ಕೆಳಗಿನ ಪದಗಳಿಗೆ ಅನ್ಯಲಿಂಗರೂಪವನ್ನು ಬರೆಯಿರಿ,
   ಅರಸು, ಅರಸಿಯರು, ಹೆಣ್ಣು, ರಾಜ, ಕವಿ, ಹಾಡಿದನು, ಹೆಣ್ಣುಮಕ್ಕಳು, ಸ್ತ್ರೀ, ಗಂಡಿಗಿಂತ.
95. ಲೋಪ, ಆಗಮ ಮತ್ತು ಆದೇಶ ಸಂಧಿಗಳನ್ನು ವಿಂಗಡಿಸಿ ಬರೆಯಿರಿ.
  ಒಮ್ಮೊಮ್ಮೆ, ಇನ್ನೆಲ್ಲಿ, ನೂರೆಂಟು, ಕಣ್ಣೆದುರು, ಇದೀಗ, ಕಲ್ಲೊಗೆದಿ, ಇನ್ನೊಬ್ಬಳಿಗೆ, ನಾನರಿಯೆ., ನೂರಾರು, ಒಂದೊಂದು, ಪ್ರತಿಯೊಂದು, ಇನ್ನುಳಿದ,  ಹೆಸರೇನಾದರೂ, ಇನ್ನೊಂದು, ಇಂಥದೊಂದು, ಇನ್ನೊಂದಿಲ್ಲ, ಮನಸ್ಸೆಷ್ಟು, ಗಾಡಿಯನ್ನು, ವೈಭವವನ್ನು, ಹವೆಯಾಡು, ವ್ಯವಸ್ಥೆಯನ್ನು, ಇದೀಗ, ಜಾಗವನ್ನು, ಶಿಖರವನ್ನು, ಶಿಲೆಯನ್ನು, ಪಾಟಿಯನ್ನು, ಕೆಲವೊಂದು, ಟೊಪ್ಟಿಗೆಯನ್ನು, ಒರೆಗಲಿಗ್ಲೆ, ಅಡಿಗಲ್ಲು, ಸಹಜವಾಗಿ, ಬಣ್ಣವನ್ನು, ಅತುಲವೈಭವವನ್ನು, ಬೀದಿಯಲ್ಲಿ, ದುರಸ್ತಿಯನ್ನು, ವಿಶಾಲವಾಗಿದೆ.
96. ಸಂಧಿ ಬಿಡಿಸಿ ಸಂಧಿಯ ಹೆಸರನ್ನು ತಿಳಿಸಿರಿ.
  ಉಪಾಹಾರ, ಅತ್ಯಾದರ, ಪಟ್ಟಾಭಿಷೇ, ರಾಜ್ಯಾಭಿಷೇ, ಸಿಂಹಾಸನ, ತಪಶ್ಚರ್ಯ, ಲಕ್ಷಾನುಲಕ್ಷ, ವಾಚನಾಲಯ, ವಸ್ತುಸಂಗ್ರಹಾಲಯ, ಕೋಟ್ಯವಧಿ,
97. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
  ಹಗಲೆ, ಕತ್ತಲು, ಅನಾಯಾಸ, ಪ್ರಾಚೀನ, ಅನುಕೂಲ, ಪುರಾತನ, ಪ್ರಖ್ಯಾತ, ಸಹಜ, ಉತ್ತಮವಾದ, ಹಿಂದೆ, ವಿದೇಶ, ಅನುಭವವನ್ನು, ಆಧುನಿಕ, ಅನುಭವಿ, ಕನಿಷ್ಠ,
98. ಭೂತ, ವರ್ತಮಾನ ಮತ್ತು ಭವಿಷ್ಯತ್‍ಕಾಲ ವಾಕ್ಯಗಳನ್ನು ಗುರುತಿಸಿ, ಬೇರೆ ಕಾಲಗಳಿಗೆ ಪರಿವರ್ತಿಸಿ ಬರೆಯಿರಿ.
  ವೆಸ್ಟ್‍ಮಿನ್‍ಸ್ಟರ್ ಅಬೆ ನೋಡಿಕೊಂಡು ಬಂದೆವು.
  ಬಹಳ ಹೊತ್ತು ನಡುನಡುವೆ ನಿಲ್ಲಬೇಕಾಗುತ್ತದೆ.
  ಸಾಂಸ್ಕøತಿಕವಾಗಿ ಶ್ರೀಮಂತನಾಗಿರುವ ವ್ಯಕ್ತಿ ಎಲ್ಲಿದ್ದರೂ ಸಾಂಸ್ಕøತಿಕ ರಾಯಭಾರಿಯಂತೆ ನಡೆದುಕೊಳ್ಳುತ್ತಾನೆ.
  ಭೂಗರ್ಭದಲ್ಲಿ ಗಾಡಿಯನ್ನು ಒಯ್ದಿದ್ದಾರೆ!
  ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು.
  ಸ್ಯಾವ್ಯೊಯ್ ಸಿಂಪಿಗಳು ಇಲ್ಲಿ ಪ್ರಸಿದ್ಧಿಯನ್ನು ಹೊಂದಿದ್ದಾರೆ.
  ಇಲ್ಲಿ ಸಂತ, ಸಾರ್ವಭೌಮರು ಮಲಗಿರುವರು.
  ಅಡವಿಯ ಹೂವು, ಯುದ್ಧಸಾಮಗ್ರಿ ಎಲ್ಲವೂ ಇಲ್ಲಿ ದೊರೆಯುತ್ತವೆ!
  ಗಾಳಿ ಬೀಸುವಷ್ಟು ಹವೆಯಾಡುವಂತೆ ಇಲ್ಲಿ ವ್ಯವಸ್ಥೆಯನ್ನು ಮಾಡಿದ್ದಾರೆ. 
  ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ.
  ಕವಿಪುಂಗವರು ಒರಗಿರುವರು.
  ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ.
99. ಕೆಳಗಿನ ಪದಗಳು ನಾಮವಾಚಕದ ಯಾವ ಪ್ರಕಾರಕ್ಕೆ ಸೇರುತ್ತವೆ?
   ನೂರು, ನೂರುರೂಪಾಯಿ, ಒಂದು, ಆರುಪೆನ್ನಿ, ಒಂದುಸಾವಿರ,  ಸಾವಿರವರ್ಷದಷ್ಟು, ಇಂಥ, ಎಂಥ, ಎಡಬಲ, ಇಷ್ಟು, ಸಣ್ಣಕಲ್ಲು, ಸಣ್ಣಬಾಗಿಲು, ಅಷ್ಟು, ಎಷ್ಟು, ಇಂತಹ, ಅದು,
100. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧೀ ಪದವನ್ನು  ಬರೆಯಿರಿ. 
  ಬುದ್ಧಿ: ಭೌದ್ಧಿಕ :: ಇತಿಹಾಸ: ------
  ಶಾರೀರಿಕ: ಶರೀರ :: ಸಾಂಸ್ಕೃತಿಕ---------
  ಚರಿತ್ರ್ರೆ: ಚಾರಿತ್ರಿಕ :: ಸಾಹಿತ್ಯ-----------
  ಕರುಣೆ: ಕಾರುಣ್ಯ :: ವಿಶಾಲ--------
  ಸಮಾಜ: ಸಾಮಾಜಿಕ :: ಶಿಕ್ಷಣ------

ನಿಮ್ಮ ಅನಿಸಿಕೆ ಸಲಹೆಗಳಿಗೆ ಸ್ವಾಗತ.
***************************