Sunday 12 August 2018

ಮೆರೆಯುತಿಹರು

ಬುದ್ಧಿಜೀವಿಯ ಮುಖವಾಡ ಧರಿಸಿ
ಮುಗ್ಧಮನಸ್ಸುಗಳ ದಿಕ್ಕನೇ ಕೆಡೆಸಿ
ವ್ಯವಸ್ಥೆಯನೇ ಬುಡಮೇಲುಗೊಳಿಸಿ
ಸ್ವಾರ್ಥದಿಂ ಮೆರೆಯುತಿಹರು ನನಕಂದ||

ಭೇದವೆತ್ತಣದೊ

ಭೂಮಿತಾಯ ಕುಡಿಗಳಾಗಿ ಜನಿಸಿ               
ವಾಯುವಿನನುಗ್ರದಿಂ ಉಸಿರಾಡಿ               
ಜಲದೇವಿಯ ಕೃಪೆಯಿಂ ಬಾಳುತಿಹ                     
ನರರಲಿ ಭೇದವೆತ್ತಣದೊ ನನಕಂದ||

Friday 10 August 2018

ರೂಪಣಾತ್ಮಕ – 1 ನೀಲ ನಕಾಶೆ, ಪ್ರಶ್ನೆ ಪತ್ರಿಕೆ

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ರೂಪಣಾತ್ಮಕ ಮೌಲ್ಯಮಾಪನ - 1
10 ನೆಯ ತರಗತಿ ಪ್ರಥಮ ಭಾಷೆ ಕನ್ನಡ - ಲಿಖಿತ ಪರೀಕ್ಷೆ- ಪ್ರಶ್ನೆ ಪತ್ರಿಕೆ
ಸಮಯ : 45 ನಿಮಿಷಗಳು                                                      ಗರಿಷ್ಠ ಅಂಕಗಳು : 20
ಸೂಚನೆಗಳು :
ಪ್ರಶ್ನೆ ಪತ್ರಿಕೆಯು ಎ, ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
ವಿಭಾಗ ` ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 15 ಅಂಕಗಳು.
ವಿಭಾಗ `ಬಿ ಆನ್ವಯಿಕ ವ್ಯಾಕರಣ 03 ಅಂಕಗಳು.
ವಿಭಾಗ `ಸಿ ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ್ಯ 02 ಅಂಕಗಳು.
ಭಾಗ - `
(ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 15 ಅಂಕಗಳು)
ಕೊಟ್ಟಿರುವ ಪ್ರತಿಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.                          3 X 1=3
1. ‘ಬ್ಲಾಕ್ ಔಟ್ ನಿಯಮವೆಂದರೇನು?
2. ಕವಿ ಶಿವರುದ್ರಪ್ಪನವರು ಯಾವುದನ್ನು ಎಚ್ಚರದಲಿ ಮುನ್ನಡೆಸೋಣವೆಂದಿದ್ದಾರೆ?
3. ವಿವೇಕಾನಂದರು ಯಾವುದರ ರೂಪಕವಾಗಿದ್ದಾರೆ?
ಕೊಟ್ಟಿರುವ ಪ್ರತಿಪ್ರಶ್ನೆಗೂ ಮೂರು / ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.                  2 X 2=4
4. ಬೇಂದ್ರೆಯವರು ಕಾಲಪಕ್ಷಿಯ ಬೃಹತ್ ರೂಪವನ್ನು ಹೇಗೆ ನಿರೂಪಿಸಿದ್ದಾರೆ?
5. ಸೈನಿಕರ ಉಡುಪಿನಲ್ಲಿ ಬಂದವರು ಮುದುಕಿಯ ಮನೆಯಿಂದ ನಿಶ್ಶಬ್ದವಾಗಿ ಹೊರನಡೆದರೇಕೆ?
ಕೊಟ್ಟಿರುವ ಪ್ರತಿಹೇಳಿಕೆಯನ್ನೂ ಸಂದರ್ಭದೊಡನೆ ವಿವರಿಸಿರಿ.                            1 X 2=2
6. “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?”
                          ಅಥವಾ
         ಮುಂಗಾರಿನ ಮಳೆಯಾಗೋಣ.
ಕೊಟ್ಟಿರುವ ಲೇಖಕರ / ಕವಿಗಳ ಕಾಲ, ಸ್ಥಳ ಮತ್ತು ಕೃತಿಯನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ.         1 X 2=2
7. ದ.ರಾ ಬೇಂದ್ರೆ  ಅಥವಾ  ಪು.ತಿ.ನ.
ಕೊಟ್ಟಿರುವ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.                       1 X 2=2 
8.       ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
        ಮಂಡಲ-ಗಿಂಡಲಗಳ ಗಡ ಮುಕ್ಕಿ
        ತೇಲಿಸಿ ಮುಳುಗಿಸಿ ಖಂಡ-ಖಂಡಗಳ
        ಸಾರ್ವಭೌಮರಾ ನೆತ್ತಿಯ ಕುಕ್ಕಿ
            ಹಕ್ಕಿ ಹಾರುತಿದೆ ನೋಡಿದಿರಾ?
ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿರಿ.                                              1 X 2=2
9.      ಕಲುಷಿತವಾದೀ ______________________       
       _________________________________
       _________________________________
       ________________________ ಮುಟ್ಟೋಣ                
                               ಅಥವಾ
        ಮತಗಳೆಲ್ಲವೂ _______________________       
       __________________________________                                   
        __________________________________
       _____________________________ ಬಿತ್ತೋಣ
ಭಾಗ - `ಬಿ
(ಆನ್ವಯಿಕ ವ್ಯಾಕರಣ  03 ಅಂಕಗಳು)
ಕೊಟ್ಟಿರುವ ಪ್ರತಿಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಸರಿಯಾದ ಆಯ್ಕೆಯನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ. 3X=3     
10. ‘ಮನ್ವಂತರ À ಸಂಧಿಗೆ ಉದಾಹರಣೆಯಾಗಿದೆ:                       
(ಎ)ವೃದ್ಧಿ                    (ಬಿ) ಯಣ್              (ಸಿ) ಗುಣ                      (ಡಿ) ಜಸ್ತ್ವ
11. ‘ಬಟ್ಟಬಯಲು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ:
(ಎ) ದ್ವಿರುಕ್ತಿ                (ಬಿ) ಜೋಡುನುಡಿ      (ಸಿ) ನುಡಿಗಟ್ಟು                  (ಡಿ) ಅನುಕರಣಾವ್ಯಯ
12. ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿದಾಗ ಆಗುವುದು:
(ಎ) ಪ್ಲುತಾಕ್ಷರ             (ಬಿ) ಗುಣಿತಾಕ್ಷರ        (ಸಿ) ಸಂಯುಕ್ತಾಕ್ಷರ             (ಡಿ) ವರ್ಣಮಾಲೆ
ಭಾಗ - `ಸಿ
(ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ್ಯ  02 ಅಂಕಗಳು)
13. ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ.                       1 X 2=2
·       ಮನಸಿದ್ದರೆ ಮಾರ್ಗ.
·       ತಾಳಿದವನು ಬಾಳಿಯಾನು.
ಅಥವಾ
ನಿಮ್ಮನ್ನು ದಾವಣಗೆರೆಯ ಹರಿಹರೇಶ್ವರ ಪ್ರೌಢಶಾಲೆಯ ಕವಿತ/ಕಾರ್ತಿಕ್ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಆಚರಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದ ವರದಿಯನ್ನು ಪ್ರಕಟಿಸುವಂತೆ ಕೋರಿ ವಿಜಯವಾಣಿ ದಿನಪತ್ರಿಕೆಯ ಸಂಪಾದಕರಿಗೆ ಒಂದು ಮನವಿ ಪತ್ರ ಬರೆಯಿರಿ.
***************

Monday 30 July 2018

ಈಗಿನ ಶಿಕ್ಷಣ

ಪರೀಕ್ಷೆಗಳ ಹಿಂದೆ ಹಿಂದೆಯೇ ಓಟ ಪಾಠ
ಪಾಸಿಂಗ್ ಪ್ಯಾಕೇಜುಗಳ ಭರದ ಓಡಾಟ   
ಅಂಕಗಳಿಕೆಗಾಗಿಯೇ ಸಕಲರ ಪರದಾಟ                     
ಇದು ಈಗಿನ ಶಿಕ್ಷಣದ ನೋಟ ನನ ಕಂದ||

Wednesday 25 July 2018

ನಿನ್ನ ನೀ ಅರಿ

ನನ್ನವರು ನನ್ನರಿಯಲಾರದೆ ಹೋದರೆನ್ನದಿರು
ನಿನ್ನವರ ನೀನರಿತುದೆಷ್ಟೆಂದು ತಿರುಗಿ ನೋಡು
ನನ್ನನರಿತವರಿಹರಿನ್ನೆಲೋ ಎನುತೋಡದಿರು   
ನಿನ್ನ ನೀ ಅರಿತು ನಡೆವುದನು ಕಲಿ ನನಕಂದ||

ನರರ ನರ್ತನ

ವರ್ತಮಾನದಲಿ ಭೂತವ ಬೆದಕಿ ಭವಿಷ್ಯವನೆದುರು ನೋಡುತ
ಕರ್ತವ್ಯವ ತೂಗುವುಯ್ಯಾಲೆಯಲಿರಿಸಿ ಅನುಗಾಲವೂ ತೂಗುತ
ಮರ್ತ್ಯಲೋಕದ ಸುಖವೆಲ್ಲವೂ ತನಗೆ ಬೇಕೆಂದೆನುತ ಬಯಸುತ
ನರ್ತನವ ಮಾಡುತಿಹರೀ ನರರು ಲೋಕದಲಿ ನಿತ್ಯ - ನನಕಂದ||

Sunday 22 July 2018

ಅವಿಶ್ವಾಸ ವೇ ವಿಶ್ವಾಸ

ಮಾತಿನ ಚಕಮಕಿಯಲಿ ಸಲ್ಲದ ವಾಕ್ಝರಿಯಬ್ಬರ
ಲೋಕಸಭೆಯಲಿ ಅವಿಶ್ವಾಸ ನಿರ್ಣಯದ ಭರ
ಕುಡಿಗಣ್ಣಿನ ನೋಟ ಆತ್ಮೀಯತೆಯ ಆಲಿಂಗನ
ಮೋದಿಯನು ಜನರೆಡೆಗೆ ಕರೆತಂದಿತಲಾ ನನಕಂದ||     

ಒಂದೆಂದು ಕಡೆಗಣಿಸದಿರು

ಒಂದೇ ಒಂದು ಕಿಡಿ ದಳ್ಳುರಿಯಾಗೆಲ್ಲವನು ದಹಿಸುವುದು
ಒಂದೇ ಒಂದು ನುಡಿ ಮನೆಮನಗಳನು ಮುರಿಯುವುದು
ಒಂದೇ ಒಂದು ಆಲೋಚನೆ ಬಾಳಿನಾ ದಿಕ್ಕ ಬದಲಿಪುದು
ಒಂದೇ ಒಂದೆಂದೆನುತ ಕಡೆಗಣಿಸದಿರು ನೀ ನನಕಂದ||

Friday 20 July 2018

ಸುಖವನರಸು


ಸುಖವಿಲ್ಲಿಲ್ಲ ಇಹುದಿನ್ನೆಲ್ಲೆಲ್ಲೋ ಎನುತ ಅರಸಿ
ಸುಖಿಸುವೆನಿನ್ನೆಲ್ಲೆಲ್ಲೋ ಎನುತನುಗಾಲ ಭ್ರಮಿಸಿ
ಸುಖವನರಸರಸಿ ಅಂಡಲೆಯುತ ಕುದಿಯದಿರು
ಸುಖವಿಹುದು ನಿನ್ನೊಳಗದನರಸು ನನಕಂದ|| 

Friday 13 July 2018

ಹಾಸ್ಯದೌತಣ


ರಾಶಿಯ ಕೊರವಂಜಿ ಅವಳತಂಗಿ ಅಪರಂಜಿಯ ಹಾಸ್ಯದ ಹೊನಲು
ಬೀchi, ಕೈಲಾಸಂ, ನಾ ಕಸ್ತೂರಿಯವರ ಚತುರೋಕ್ತಿಯ ನಗೆಗಡಲು
ನಗೆರಾಯಭಾರಿ ತುಮಕೂರಿನ  ಮುಗುಳು ನಗೆಯ ನಗೆಮುಗುಳು’ 
ನಗೆ ಸಾಹಿತ್ಯೋ ಪಾಸಕರಿಗೆ ಹಾಸ್ಯದೌತಣವ ಬಡಿಸಿಹುದು-ನನಕಂದ||

Thursday 12 July 2018

ನರರು ನಲುಗುವರು


ಮರಳಿನಲಿ ಮನೆಕಟ್ಟಿ ಸಿಂಗರಿಸಿ ಸಂತಸದಿ ನಲಿಯುತಿರೆ                
ಸುರಿವ ಮಳೆಗೆ ಕಣ್ಣೆದುರೆ ಮನೆಯು ಕೊಚ್ಚಿಹೋಗುತ್ತಿರೆ
ಕರ ಹಿಸುಕಿಗೊಳುತ ದುಃಖಿಸುವ ಮುಗ್ಧ ಬಾಲಕರವೊಲ್
ನರರು ನಲುಗುವರು ಬಾಳಿನಾಟವು ಕುಸಿಯೆ  ನನಕಂದ||

Sunday 8 July 2018

ಭಾವಪೂರ್ವಕ ಶ್ರದ್ಧಾಂಜಲಿ



ಕಾಯಕದಲಿ ಕಾಯವ ಗಟ್ಟಿಗೊಳಿಸಿ
ಕರ್ಮಯೋಗವ ತಾ ನಂಬಿ
ತನ್ನೆಲ್ಲ ಕಾರ್ಯವ ತಾನೇ ಎಸಗುತ
ಕರ್ಮ ಯೋಗಿಯಂತೆ ಬದುಕಿದಾಕೆ;
ತನ್ನ ಸಿದ್ಧಾಂತಗಳಿಗೆ ತಾ ಬದ್ಧರಾಗಿ
ತನ್ನಂತೆ ತಾನಿದ್ದು ಕೊನೆವರೆಗೂ
ತನ್ನ ತನುಮನವನು ಅದಕೆ ಅಣಿಗೊಳಿಸಿ
ತನ್ನತನದೊಡನೆ ಸದಾ ಬದುಕಿದಾಕೆ;
ಮಕ್ಕಳು ಮರಿಗಳ ಅಕ್ಕರೆಯಿಂದ ಸಲಹುತ
ಬಸುರಿ ಬಾಣಂತಿಯರ ಆರೈಕೆ ಮಾಡುತ
ಅನಾರೋಗ್ಯದಿಂದ ಬಳಲುವವರ ಸಂತೈಸುತ
ತನ್ನವರ ಸೇವೆಗೆ ಮುಂದಾಗಿ ಬದುಕಿದಾಕೆ;
ತನ್ನೊಲವಿನ ಬಂಧು ಮಿತ್ರರ ತಪ್ಪು ಒಪ್ಪುಗಳ ಮನ್ನಿಸುತ
ಅವರ ಯೋಗಕ್ಷೇಮಕೆ ಕಟಿಬದ್ಧಳಾಗಿ ಅನವರತ ನಿಂತು
ಕಿಂಚಿತ್ತು ಚ್ಯುತಿ ಬಾರದಂತೆ ಎಚ್ಚರದಿ ಕಾರ್ಯ ನಿರತಳಾಗಿ
ಬದಕ ಹಸನಗೊಳಿಸೆ ತುಡುಕಿ ಬದುಕಿದಾಕೆ;
ಸೋದರಿಯ ಮಕ್ಕಳ ಅಕ್ಕರೆಯಿಂದ ಸಾಕಿ ಸಲಹಿ
ಸೋದರನಿಗೆ ತನ್ನೆಲ್ಲವನೂ ಧಾರೆಯೆರೆದು
ತವರು ಮನೆಯೇಳ್ಗೆಯ ಮನಸಾರೆ ಬಯಸುತ
ಭ್ರಾತೃ ಪ್ರೇಮದಿ ಪರಾಕಾμÉ್ಠಯ ಮೀರಿದಾಕೆ;
ಕೌತುಕಗಳಲಿ ಕುತೂಹಲವ ತಳೆದು
ವಿಸ್ಮಯಗಳನು ವಿಸ್ಮಯದಿಂದ ನೋಡಿ
ಹಾಡು ಹಸೆಯ ಮನಸಾರೆ ಮೆಚ್ಚುತ
ಹಬ್ಬ ಹರಿದಿನವ ಬಿಡದೆ ಮಾಡಿದಾಕೆ;
ಚಸ್ಮದ ಮೊರೆಯಿಲ್ಲದೆ ಕೊನೆಯವರೆಗು ಓದಿಬರೆದು
ಆರೋಗ್ಯ ಸಲಹೆಗಳ ಕಾಳಜಿಯಿಂದ ಸಂಗ್ರಹಿಸುತ
ಬಿಡದೆ ಆರೋಗ್ಯದ ಕಡೆಗೆ ಗಮನನೀಡಿ
ಜತನದಿಂದ ತನ್ನಾರೋಗ್ಯವ ತಾ ಕಾಯ್ದುಕೊಂಡಾಕೆ;
ಒಡವೆ ವಸ್ತ್ರ ಆಸ್ತಿ ಮೋಹ ಕಿಂಚಿತ್ತಿಲ್ಲದೆ
ಒಡನಾಡಿಗಳಲಂಕಾರವ ಮನಸಾರೆ ಮೆಚ್ಚಿ
ಒಡಹುಟ್ಟಿದವರ ಒಳಿತನೇ ತಾ ನಿತ್ಯ ಬಯಸಿ
ಒಡಲ ಸಂಕಟವ ಮರೆಮಾಚಿ ಬಾಳದೂಡಿದಾಕೆ;
ಸ್ವಚ್ಛತೆಗೆ ಕೊನೆಯವರೆಗು ಆದ್ಯತೆಯ ನೀಡಿ
ವಸ್ತು ವಾಸ್ತವ್ಯಗಳನು ಒಪ್ಪಗೊಳಿಸಿ
ಚಿಂದಿ ಬಟ್ಟೆ-ಬರಿಯನು ಬಿಡದೆ ಸ್ವಚ್ಛಗೊಳಿಸಿ
ಶುಭ್ರತೆಗೆ ಮತ್ತೊಂದು ಹೆಸರಾದಾಕೆ;
ಹಪ್ಪಳ ಸಂಡಿಗೆ ಉಪ್ಪಿನಕಾಯಿ ಬಾಳಕವ ಸಿದ್ಧಗೊಳಿಸಿ
ಬೋಂಡ ಪಕೋಡ ಚಕ್ಕುಲಿ ಕೋಡುಬಳೆಗಳನು ಇಚ್ಛಿಸಿ
ಒಳ್ಳೆಣ್ಣೆಯೊಂದಿಗೆ ಉಪ್ಪಿನಕಾಯಿ ಚಟ್ನಿಪುಡಿ ಗೊಜ್ಜಮಿದ್ದು
ಕಾಳುಹುಳಿ ಹಾಲುಬಾಯಿ ಸವಿಯ ಬಯಸಿದಾಕೆ;
ಶ್ರೀನಿವಾಸಜೋಯಿಸರ ಮಡದಿಯಾಗಿ
ಪುರಾಣಿಕರ ಆಸರೆಯಲಿ ಬಾಳಿ ಬದುಕಿ
ನಿಂಗು, ಅಮ್ಮ, ಅಜ್ಜಿ, ಗಿಂಡಿಅಜ್ಜಿ, ನಾಗರತ್ನಳಾಗಿ
ಯಾರಿಗೂ ಯಾವುದಕು ಎಂದೆಂದೂ ತಲೆಬಾಗದೆ
ಯಾರಿಗೂ ಯಾವುದಕು ಹೊರೆಯಾಗದಂತೆ ಬದುಕಿದ
ಅವರಾತ್ಮಕೆ ಚಿರ ಶಾಂತಿ ದೊರಕಲಿ
ಅವರು ಬಯಸಿದ ಮುಕ್ತಿ ಸಿಗಲಿ.
  *************

ಕಾರ್ಯಗಳ ಫಲ


ಹಿಟ್ಟೊಂದೆ ಹದವೊಂದೆ ಬಳಪ ಕರಣಗಳೊಂದೆ
ಅಟ್ಟಡುಗೆಗಳ ವಿಧಿವಿಧಾನಗಳೆಲ್ಲವೂ ತಾನೊಂದೆ
ಕಟ್ಟಕಡೆಗೆ ಪರಿಮಳವು ತಾನೊಂದೆ ರುಚಿಮಾತ್ರ ಬೇರೆ
ಕಾರ್ಯಗಳ ಫಲವು ಮನಸ್ಸಿನ ಸ್ಥತಿಯಂತೆ ನನಕಂದ||

‘ಬೆಕ್ಕು ಹಾರುತಿದೆ ನೋಡಿದಿರಾ?’


ಬೇಂದ್ರೆಯವರು ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬ ತಮ್ಮ ಕವನವನ್ನು ಅಣಗಿಸಿ ‘ಬೆಕ್ಕು ಹಾರುತಿದೆ ನೋಡಿದಿರಾ?’ ಎನ್ನುವ ‘ಅಣಕುವಾಡು’ ಕವನವನ್ನು ಬರೆದರು.

ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||

ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||

ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||

ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||

ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||

ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||

ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||


ಚಿತ್ರ : ಗೂಗಲ್ ಕೃಪೆ


Saturday 7 July 2018

ವಿಧಿಯಿಚ್ಛೆಯ ಮೀರಲಾದೀತೆ


ವಿಧವಿಧದಾಟಗಳನು ಹೂಡುತ ಮಾಯಾ ಮುಸುಕೆಳೆದು
ವಿಧವಿಧ ಆಲೋಚನೆಗಳನು ಮನದೊಳಗೆ ಕೆರಳಿಸುತ
ವಿಧೇಯರಂತಾತನಾಣತಿಯ ಪಾಲಕರನ್ನಾಗಿಸುವನು
ವಿಧಿರಾಯನಿಚ್ಛೆಯನೆಂತು ಮೀರಲಾದೀತು ನನಕಂದ||

Wednesday 4 July 2018

ತಡೆವುದತೆಂತು


ಮೋಹದಾ ಪಾಶ ಬಿಗಿ ಬಿಗಿದು ಉರುಳಾಗಿ ಸುತ್ತುತಿರೆ
ಮೋಡಿಗೊಳಿಪ ಸವಿಸವಿಯ ನುಡಿಗಳು ಕಟ್ಟಿಹಾಕುತಿರೆ
ಮಾಟದ ಕಾಟ ಕಾಣದಂತೆ ಬೆಂಬಿಡದೆ ಸೆಳೆದು ಕಾಡುತಿರೆ
ಜೌವನದ ಸೊಕ್ಕಿನುದ್ವೇಗವ ತಡೆವುದತೆಂತು ನನಕಂದ||