Monday 7 September 2015

ಹೋರಾಟದ ನೋಟ

ಡಬ್ಲ್ಯು ಸಿ ಬ್ಯಾನರ್ಜಿಯ ಅಧ್ಯಕ್ಷತೆಯಲ್ಲಿ
ಮೊದಲಾಯ್ತು ಮುಂಬೈನ ಅಧಿವೇಶನ
ಸೂರತ್ ಅಧಿವೇಶನದಿ ಒಡಕುಂಟಾಯ್ತು 
ಗಾಂಧೀಜಿಗೆ ಅಸಹಕಾರ ಚಳವಳಿಯ 
ನಾಯಕತ್ವವ ನೀಡಿತು ನಾಗಪುರದ ಅಧಿವೇಶನ
ಅಸಹಕಾರ ಚಳುವಳಿಗೆ ಚಾಲನೆಯು ಇದರಿಂದಾಯ್ತು
ಗಾಂಧೀಜಿಯ ಮನವ ಘಾಸಿಗೊಳಿಸಿತು ಚೌರಿಚೌರ ಘಟನೆ  
ಸ್ಥಗಿತಗೊಳಿಸಿತು ಅಸಹಕಾರ ಚಳವಳಿಯ
ಸೈಮನ್ ಗಲಭೆಗೆ ಬಲಿಯಾದರು ಲಾಲಾ ಲಜಪತರಾಯ
ಸಂಪೂರ್ಣ ಸ್ವರಾಜ್ಯವ ನೆಹರು ವರದಿ ಬಯಸಿದರೇನು?
ಸಂಪೂರ್ಣ ಉಪೇಕ್ಷಿಸಿತ್ತು ಸರ್ಕಾರ ವರದಿಯ
ಸಂಪೂರ್ಣ ಸ್ವರಾಜ್ಯನೇ ಗುರಿಯಾಗಿರಿಸಿತು 
ಲಾಹೋರಿನಾ ಅಧಿವೇಶನ, ಕೊಟ್ಟಿತ್ತು ಗಾಂಧೀಜಿಗೆ 
ಕಾನೂನು ಭಂಗ ಚಳವಳಿಯ ನೇತೃತ್ವವ 
ಆಯ್ತಿದುವೇ ಉಪ್ಪಿನಾ ಸತ್ಯಾಗ್ರಹಕ್ಕೆ ಹಾದಿ
ತುಂಬಿ ತುಳುಕಿತ್ತು ಸೆರೆಮನೆಯ ಹಾದಿ
ದುಂಡುಮೇಜಿನ ಪರಿಷತ್ತ ಕರೆದರೇನು? ಹೋದವರು ಯಾರು?
ಇದರಿಂದಾಯ್ತು ಗಾಂಧೀ-ಇರ್ವಿನ್ನರಾ ಒಪ್ಪಂದಕೆ ದಾರಿ 
2ನೇ ದುಂಡು ಮೇಜಿನ ಪರಿಷತ್ತಿಗೆ ಗಾಂಧೀಜಿ ಹೋದರೇನಾಯ್ತು ಲಾಭ?
ಪುನರಾರಂಭವಾಯ್ತು ಕಾನೂನು ಭಂಗ ಚಳವಳಿಯು
1935 ಶಾಸನದಲೂ ಸಿಗಲ್ಲಿಲ್ಲವೇ ಸಂಪೂರ್ಣ ಸ್ವರಾಜ್ಯ
1940 ಲಾಹೋರಿನಾ ಅಧಿವೇಶನದಿ ವಿಷದ ಪಡಿಸಿದರಲಾ ಜಿನ್ನಾ 
ವಿಷಾದದ ವಿಭಜನೆಯ ವಿಷಯವ, ದೇಶವ ಒಡೆವ ವಿಚಾರವ 
2ನೇ ಮಹಾಯುದ್ಧದಾ ಹಿನ್ನೆಲೆಯಲೇ ಆಗಸ್ಟ್ ಕೊಡುಗೆ,
ಕರುಣಿಸಿತ್ತು ಡೊಮಿನಿಯನ್ ಸ್ಟೇಟಸ್ ಕ್ರಿಪ್ಸನಾ ಸಂಧಾನ 
ಕಾಂಗ್ರೇಸ್ ಇದನು ತಿರಸ್ಕರಿಸಿದರೇನು, ಪುರಸ್ಕರಿಸಿದರಲಾ ಜಿನ್ನಾ
ಜಿನ್ನಾರ ನಿಲುವು ದೇಶದ ಸಮಗ್ರತೆಯನೇ ಒಡಯ ಹೊರಟ್ಟಿತ್ತು
ದೇಶವನೇ ತುಂಡು ತುಂಡು ಮಾಡ ಬಯಸಿತ್ತು
ಮುಂಬೈನ ಅಧಿವೇಶದ ಚಲೆ ಜಾವ್ ಚಳುವಳಿಯ ನಿರ್ಣಯಕೆ
ಸಹಕರಿಸಲಿಲ್ಲವೇ ಜಿನ್ನಾ , ಕಿಂಚಿತ್ತು ವಿಚಲಿತನಾಗಲಿಲ್ಲವೇ 
ನೆಹರು ನಾಯಕತ್ವದಲಿ ಮಧ್ಯಂತರ ಸರ್ಕಾರ ರಚನೆಯಾದರೇನು ?
ಜಿನ್ನಾನ ಜಿಗುಟುತನ ಅಳಿಯಲಿಲ್ಲವೇ ? ಉಳಿಯಲಿಲ್ಲವೇ ಅಖಂಡ ಭಾರತ !
ನೇರ ಕಾರ್ಯಾಚರಣೆದಿನಹೊತಿತ್ತ್ತು ಕೋಮು ಡೊಳ್ಳುರಿ 
ದೇಶದ ವಿಭಜನೆಗೆ ಇದುವೆ ದಾರಿಯಾಗಿತ್ತು !
ನೋವಿನಾ ನಡುವೆಯೂ ಸಂತಸದ ಸ್ವಾತಂತ್ರ್ಯ ದೊರಕಿತ್ತು
ಬೆನ್ನ ಹಿಂದೇ ಬಂದಿತ್ತು ಸಮಸ್ಯೆ , ಸವಾಲುಗಳ ಸರಮಾಲೆ.
ಇವನೆದುರಿಸುತಲೇ ಕಳೆದೆವಲಾ ದಶಕ ದಶಕಗಳ ಯೋಜನೆಗಳ ರೂಪಿಸುತ 
ಯೋಚನೆ, ಯೋಜನೆಗಳಿಂದಲೇ ಪರಿಹಾರ ದೊರಕದು, ಬೇಕಿಂದು 
ದೇಶದ ಉಳಿವು ಸಮೃದ್ಧಿಗೆ, ಪ್ರಾಮಾಣಿಕ ಪ್ರಯತ್ನ, ಜನನಾಯಕರ ಆದರ್ಶ
ನಿಸ್ವಾರ್ಥ ಸೇವೆ, ತ್ಯಾಗಭಾವದೊಂದಿಗೆ ಶೀಘ್ರವೇ ಪುನರುತ್ಥಾನವಾಗಬೇಕು 
ಕರುಣೆ, ಸತ್ಯ, ಪ್ರಾಮಾಣಿಕತೆ, ಅಹಿಂಸೆಯಾ ಮಾರ್ಗವ ಮತ್ತೊಮ್ಮೆ ಹಿಡಿಯ ಬೇಕು
ಸಹಕಾರ, ಸಹಾನುಭೂತಿ, ಸಂಯಮ, ಸಹಬಾಳ್ವೆ ಎಲ್ಲೆಡೆಯು ಮೂಡಬೇಕು.

ಎಲ್ಲರಂಗದಲು ದೇಶವನು ಉನ್ನತ್ತೋನ್ನತಿಗೆ ಕೊಂಡೊಯ್ಯ ಬೇಕು

No comments:

Post a Comment