Monday 22 February 2016

'ಎ''ಏ''ಐ' ಕಾರದಿಂದ ಪ್ರಾರಂಭವಾಗುವ ಗಾದೆಗಳು

¨     ಎಂಜಲ ತಿಂದರೂ ಅಂಜದೆ ತಿನ್ನು
¨     ಎಂಜಲಿಗೆ ಹೇಸದವಳು ತಂಗಳು ಬಿಟ್ಟಾಳೆಯೇ ?
¨     ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ
¨     ಎಂಟು ವರ್ಷಕ್ಕೆ ನನ್ನ ಮಗ ದಂಟಾದ
¨     ಎಂಟು ಹೊನ್ನು ಘನವಾದ ನಂಟು ತಂತು
¨     ಎಂತರಸು ಒಲಿದರೂ ಮಂತ್ರಿಯ ಹಗೆಬೇಡ.
¨     ಎಂಜಲು ಎಲೆ ಆಯ್ದು ತಿನ್ನೋಕ್ಕಿಂತ ನಾಲ್ಕು ಮನೆ ಮುಸುರೆ ತಿಕ್ಕಿ ತಿನ್ನೋದು ಲೇಸು.
¨     ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ
¨     ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
¨     ಎಚ್ಚರಿಸದವನ ಮನೆ ಹಾಳು, ಒತ್ತರಿಸಿದವನ ಹೊಲ ಹಾಳು.
¨     ಎಟ್ಟೆ ಗಂಡಗೆ ಖೊಟ್ಟಿ ಹೆಂಡತಿ
¨     ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
¨     ಎಡರು ಬಂದಾಗ ಎದೆಕೊಡು.
¨     ಎಡವಿದ ಕಾಲು ಎಡವುದು ಹೆಚ್ಚು
¨     ಎಣ್ಣೆ ಕಂಡ ಕಡೆ ಮಗೂ ಹೆರೋದು.
¨     ಎಣ್ಣೆ ಚೆಲ್ಲಿದವನೂ ಅತ್ತ, ಕಾಯಿ ಚೆಲ್ಲಿದವನೂ ಅತ್ತ.
¨     ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
¨     ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
¨     ಎಣ್ಣೆ ಬರುವಾಗ ಗಾಣ ಮುರೀತು.
¨     ಎಣ್ಣೆ ಬಿಟ್ಟರೆ ಕಣ್ಣಿಗೆ ಗುಣ, ನೀರು ಬಿಟ್ಟರೆ ಗಿಡಕ್ಕೆ ಗುಣ.
¨     ಎತ್ಕೊಂಡು ಹೋಗೋರಿದ್ರೆ ಸತ್ತ ಹಾಗೆ ಬಿದ್ದೇನು.
¨     ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ
¨     ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಎಳೆದರಂತೆ (ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು).
¨     ಎತ್ತಿಗೆ ಭತ್ತದ ಚಿಂತೆ ಬಂದೀತೆ ?
¨     ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ
¨     ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
¨     ಎತ್ತು ಕದ್ದ ಕಳ್ಳ ಹಗ್ಗ ಮರೀತಾನೆಯೇ?
¨     ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ.
¨     ಎತ್ತು ಮಾರಿದವಗೆ ಹಗ್ಗದ ಆಸೆಯೇ
¨     ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲುದೆ ?
¨     ಎದ್ದರೆ ಆಳಲ್ಲ
¨     ಎದ್ದವನು ಗೆದ್ದಾನು
¨     ಎದ್ದೋಗೋ ಮಾತು ಬಿದ್ದೋಗಲಿ ಆಡೋಕಾಗಲ್ಲ, ಅನುಭವಿಸಕ್ಕಾಗಲ್ಲ
¨     ಎದೆಯುದ್ದ ಬೆಳೆದ ಮಕ್ಕಳನ್ನು ಮಿತ್ರರಂತೆ ಕಾಣ್ಬೇಕು
¨     ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ (ಎದೆ ಬಗೆದರೆ ಮೂರು ಅಕ್ಷರ ಇಲ್ಲಾ.)
¨     ಎಮ್ಮೆ ಬಿಟ್ಟ ಗಂಜಲ ಇರುವೆಗೆ ಜಲಪ್ರಳಯ
¨     ಎಮ್ಮೆ ಮೇಲೆ ಮಳೆ ಬಿದ್ದ ಹಾಗೆ.
¨     ಎಮ್ಮೆನ ನೀರಲ್ಲಿ ಮುಳುಗಿಸಿ ವ್ಯಾಪಾರ ಮಾಡಿದ ಹಾಗೆ
¨     ಎರಡು ಕಡೆ ನಂಬಿ ಕುರುಡು ದಾಸಯ್ಯ ಕೆಟ್ಟ(ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ)
¨     ಎರಡೂ ಕೈ ಸೇರಿದರೆ ಚಪ್ಪಾಳೆ (ಎರಡೂ ಕೈ ತಟ್ಟಿದರೆ ಸದ್ದು)
¨     ಎರವಿನವರು ಎರವು ಕಸಗೊಂಡರೆ ಕೆರವಿನಂತಾಯಿತು ಮೋರೆ
¨     ಎರೆ-ತೆರೆ ಬಂಗಾರ, ಮರಳು ಬರೀ ಸಿಂಗಾರ!
¨     ಎಲ್ಲ ಬಿಟ್ಟು,ಭಂಗಿ ನೆಟ್ಟ.
¨     ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
¨     ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು
¨     ಎಲ್ಲರ ಮನೆ ದೋಸೇನೂ ತೂತೇ.
¨     ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
¨     ಎಲ್ಲರಿಗೂ ಹಿಡಿಸುವ ಸಂಪ್ರದಾಯ ಯಾವುದೂ ಇಲ್ಲ.
¨     ಎಲ್ಲರು ಆಸೆ ಬಿಟ್ಟರೆ ಇಲ್ಲಿಯೇ ಕೈಲಾಸ, ಎಲ್ಲವ ಬಯಸಿ ಭ್ರಮಿಸಿದರೆ ಇಲ್ಲಿಯೇ ನರಕ
¨     ಎಲ್ಲರು ಶಿವನ ಮರೆತರೆ ಕೈಲಾಸವೇ ಹಾಳಕ್ಕು , ಎಲ್ಲರು ಶಿವನ ನೆನೆದರೆ ಇಲ್ಲಿಯೇ ಕೈಲಾಸವಕ್ಕು.
¨     ಎಲ್ಲರೂ ನಗ್ತಾರೆ ಅ೦ಥ ಕಿವುಡ ತಾನೂ ನಕ್ಕ.
¨     ಎಲ್ಲರೂ ಪಲ್ಲಕ್ಕಿಲಿ ಕೂತರೆ ಹೊರೋರು ಯಾರು
¨     ಎಲ್ಲವೂ ತಾನಗ ಬಲ್ಲೊಡೆ ಅದುವೇ ಯೋಗ
¨     ಎಲ್ಲಾ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
¨     ಎಲ್ಲಾ ಜಾಣ, ತುಸು ಕೋಣ.
¨     ಎಲ್ಲಾ ಬಣ್ಣ ಮಸಿ ನುಂಗಿತು
¨     ಎಲ್ಲಾ ಬೆಳಕಿಗಿಂತ, ಸತ್ಯದ ನುಡಿಯ ಬೆಳಕೇ ಬೆಳಕು . 
¨     ಎಲ್ಲಾ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
¨     ಎಲ್ಲಾರ ಮನೇ ದೋಸೇನೂ ತೂತು
¨     ಎಲ್ಲಿಂದ ಎಲ್ಲಿಗೆ ಹೋದರೂ ಮುತ್ತುಗಕ್ಕೆ ಮೂರೇ ಎಲೆ.
¨     ಎಲ್ಲಿಂದ ಎಲ್ಲಿಗೆ ಹೋದರೂ ವ್ಯಾಪಾರಿ ತನ್ನ ಲೆಕ್ಕ ಬಿಡ.
¨     ಎಲುಬಿಲ್ಲದ ನಾಲಿಗೆ ಎತ್ತಲಾದರೂ ತಿರುಗುತ್ತೆ.
¨     ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ
¨     ಎಲೆ ನೆಕ್ಕೋನ ಮನೆಗೆ ಮೂತಿ ನೆಕ್ಕೋನು ಬಂದ.
¨     ಎಷ್ಟು ದಕ್ಷಿಣೆಯೋ ಅಷ್ಟು ಪ್ರದಕ್ಷಿಣೆ’
¨     ಎಸರಿಗೆ ಅಕ್ಕಿ ಇಲ್ಲ ಎಳ್ಳಮಾಸೆ ಮಾಡ್ಬೇಕು
¨     ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ
¨     ಎಳ್ಳು ಬೆಲ್ಲ ಕೊಟ್ಟು ಒಳ್ಳೆ ಮಾತನಾಡು.
¨     ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ
¨     ಏತಿ ಅಂದರೆ ಪ್ರೇತಿ ಅಂದಂತೆ
¨     ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ
¨     ಏನಾದರೂ ಆಗು ಮೊದಲು ಮಾನವನಾಗು.
¨     ಏನಾದರೇನು ತಾನು ತಾನಾಗದವರೆಗೆ
¨     ಏನು ಬೇಡಿದರೊಬ್ಬ ದಾನಿಯನ್ನು ಬೇಡು, ದೀನನಾ ಬೇಡಿದರೆ ದೀನ ಏನು ಕೊಟ್ಟಾನು?
¨     ಏನೂ ಇಲ್ಲದವಗೆ ಭಯವಿಲ್ಲ
¨     ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು
¨     ಏರಿದವ ಇಳಿದಾನು ಇಳಿದವ ಏರಿಯಾನು
¨     ಏರಿನೇ ನೀರೆಲ್ಲಾ ಕುಡಿದ ಹಾಗೆ
¨     ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
¨     ಏಳಲಾರದ ಅತ್ತೆ ದೇಕಲಾರದ ಸೊಸೆ.
¨     ಏಳಲಾರದವನಿಗೆ ಏಳು ಜನ ಹೆಂಡಿರು.
¨     ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ
¨     ಐದು ಜನ ಗಂಡಂದಿರಿದ್ರು ಕಷ್ಟ ತಪ್ಪಲಿಲ್ಲ
¨     ಐದು ಬೆರಳೂ ಒಂದೇ ಸಮ ಇರೋಲ್ಲ

¨     ಐನೋರು ಇಲ್ದಿದ್ರೆ ಅಮಾವಾಸ್ಯೆ ನಿಲ್ಲುತ್ಯೇ ?

1 comment:

  1. ಮಾಡಿದ್ದುನೂ ಮಹಾರಾಯ ಗದೆ ವಿಸ್ತರಣೆ ಕಲಸಿ

    ReplyDelete