Sunday 13 January 2019

ಒಂದು ಪುಟ ಐದು ಅಂಕ


ರಾಹಿಲನು ಯಾರು?--ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಒಬ್ಬ ಡಾಕ್ಟರ್.

2.  ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದುದು ಏನು?--ಔಷದ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ

3.  ಗಡಿ ಪ್ರದೇಶದಲ್ಲಿ ಬ್ಲಾಕ್‍ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ?--ರಾತ್ರಿ ವೇಳೆ ಶತ್ರು ಸೈನಿಕರು ವೈಮಾನಿಕ ದಾಳಿ ಮಾಡಲು ಅವಕಾಶವಾಗದಂತೆ ರಕ್ಷಿಸಿಕೊಳ್ಳಲು ಪಾಲಿಸಲಾಗುತ್ತದೆ.

4.  ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು?--ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ ಸಂಕಟಕ್ಕೆ ಈಡಾದ ಮನುಷ್ಯರ ಕಡೆಯುವನು.

5.  ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು?--ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯಮಾಡುವುದೇ ಯುದ್ದ

6.  ಶ್ರೀರಾಮನ ತಂದೆಯ ಹೆಸರು ಏನು?--ದಶರಥ.

7.  ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು? -- ಪರಿಮಳದ ಹೂ, ಮಧುಪರ್ಕ, ರುಚಿಕರ ಹಣ್ಣು ಹಂಪಲುಗಳನ್ನು ಸಂಗ್ರಹಿಸಿದ್ದಳು.

8.  ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?--ಶಬರಿ.

9.  ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?--ಧನು (ಕಬಂಧ).

10. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?--ಶಬರಿ.

11.  ಶಬರಿಗೀತನಾಟಕದ ಕರ್ತೃಯಾರು?--ಪು.ತಿ. ನರಸಿಂಹಾಚಾರ್ಯ

12. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರು ಏನು?-- ವೂಲವರ್ಥ  

13. ನೆಲ್ಸನ್‍ರವರ ಮೂರ್ತಿಯಿರುವ ಸ್ಥಳದ ಹೆಸರು ಏನು?-- ಟ್ರಾಫಲ್ಗಾರ್ ಸ್ಕ್ವೇರ್ (Trafalgar Square)

14. ‘ವೆಸ್ಟ್ ಮಿನ್‍ಸ್ಟರ್ ಅಬೆ’ ಯಾರ ಸ್ಮಾರಕವಾಗಿದೆ?— ದಿವಂಗತರಾದ ಸಂತರ, ಸಾರ್ವಭೌಮರ, ಕವಿಪುಂಗವರ ಸ್ಮಾರಕವಾಗಿದೆ.

15. ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?— ‘ಚೇರಿಂಗ್ ಕ್ರಾಸ್’

16. ಟ್ರಾಮ್ ಬಸ್ಸುಗಳು ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆ ಏನು?--ಭೂಗರ್ಭದಲ್ಲಿ ಗಾಡಿಗಳನ್ನು ಓಡಾಡುವಂತೆ ವ್ಯವಸ್ಥೆ ಮಾಡಲಾಗಿದೆ. 

17. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು? -- ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ ಕಂಕಣಬದ್ಧರಾದರು.

18. ಏಷ್ಯ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು?—ಯಾವುದೆಂದರೆ ಶಿವನ ಸಮುದ್ರದ ಕಾವೇರಿ ನದಿಯ ಬಳಿಯಲ್ಲಿ ಸ್ಥಾಪಿಸಿದ ಜಲವಿದ್ಯುತ್ ಯೋಜನೆಯಾಗಿದೆ.

19. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು?-- ಸರ್ ಪದವಿ ಪದವಿಯನ್ನು ನೀಡಿ ಗೌರವಿಸಿತು.

20. ವೆಂಕಟಲಕ್ಷ್ಮಮ್ಮ ಅವರು ತಮ್ಮ ಕುಟುಂಬವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದು ಏಕೆ?--ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾಗಬೇಕೆಂಬ ಹಂಬಲದಿಂದ

21. ವಿಶ್ವೇಶ್ವರಯ್ಯಯವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?--ಎಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ.

22. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು? --ನಾಲ್ವಡಿ ಕೃಷ್ಣರಾಜ ಒಡೆಯರು

23.  ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?--  ಕ್ರಿ.ಶ 1895ರಲ್ಲಿ ಪಟ್ಟಾಭಿಷಿಕ್ತರಾದರು

24. ವಿಶ್ವೇಶ್ವರಯ್ಯನವರ ಪೂರ್ವಜರ ಸ್ಥಳ ಯಾವುದು?--(ಆಂಧ್ರದ ಕರ್ನೂಲು ಜಿಲ್ಲೆಯ ಗಿಡ್ಡಲೂರು ತಾಲೂಕಿನ) ‘ಮೋಕ್ಷಗುಂಡಂ’ ಅಗ್ರಹಾರ

25. ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವವು?--ಎಂದರೆ ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ.

26. ಮನೆ ಮಂಚಮ್ಮ ಯಾರು?--ಕತೆಯಲ್ಲಿನ ಗ್ರಾಮದೇವತೆ.

27. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?--ಸಿದ್ದಲಿಂಗಯ್ಯ.

28. ಶಿವಾನುಭವ ಶಬ್ದಕೋಶ ಬರೆದವರು ಯಾರು?--ಫ.ಗು.ಹಳಕಟ್ಟಿ.

29. ವಚನಕಾರರಿಗೆ ಯಾವುದು ದೇವರಾಗಿತ್ತು?--ಅವರ ಪ್ರಜ್ಞೆಯೇ ದೇವರಾಗಿತ್ತು.

30. ಅಶೋಕ ಪೈ ಅವರ ವೃತ್ತಿ ಯಾವುದು?--ಮನೋವೈದ್ಯರು.

31. ದೇವನೂರರ ಪ್ರಕಾರ ದೇವರು ಯಾರು? (ದೇವನೂರರ ‘ನನ್ನ ದೇವರು’ ಯಾರೆಂಬುದನ್ನು ಸ್ಪಷ್ಟೀಕರಿಸಿ.) --ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯದ ಸಮತೆಯ ಬುದ್ದನನ್ನು ಇಟ್ಟರೆ ಅದೇ ಅವರ ದೇವರು. 

32. ‘ಮಲೆಗಳಲ್ಲಿ ಮದುಮಗಳು’ ಯಾರು ಬರೆದ ಕಾದಂಬರಿ?--ಕುವೆಂಪುರವರು ಬರೆದ ಕಾದಂಬರಿ.

33. ಭಗವದ್ಗೀತೆಯನ್ನು ರಚಿಸಿದವರು ಯಾರು?--ಮಹರ್ಷಿ ವೇದವ್ಯಾಸರು.

34. ಹುಲಿಗೆ ಪರಮಾನಂದವಾಗಲು ಕಾರಣವೇನು?-ಶಾನುಬೋಗರ ದುಂಡು ದುಂಡಾದ ಶರೀರವನ್ನು ನೋಡಿದ್ದು.

35. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?--ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳುವಂತೆ ಮಾಡಿದ ದೊಂಬರಾಟ.

36. ಶಾನುಭೋಗರಿಗೆ ಬ್ರಹ್ಮಾಸ್ತ್ರ ಯಾವುದು?-- ಖಿರ್ದಿಪುಸ್ತಕ.

37. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?--ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.

38. ‘ವೃಕ್ಷ ಸಾಕ್ಷಿ’ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?-- ದುರ್ಗಸಿಂಹನ ಕರ್ನಾಟಕ ಪಂಚತಂತ್ರ ಕೃತಿಯಿಂದ ಆರಿಸಲಾಗಿದೆ.

39. ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?--ಹೊನ್ನಿನ ಕಳ್ಳತನದ ಆರೋಪವನ್ನು ಹೊರಿಸಿದನು.

40. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?--ಏಕೆಂದರೆ ಧರ್ಮಬುದ್ಧಿಯು ಕದ್ದಿರುವದಕ್ಕೆ ಆಲದ ಮರವೇ ಸಾಕ್ಷಿ ಎಂದು ಹೇಳಿದುದರಿಂದ.

41. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?-- ದೇವರು, ಗುರುಗಳು, ವೇದಾಧ್ಯಯನ ನಿರತರನ್ನು ಪೂಜೆ ಮಾಡುತ್ತ ಕಳೆದನು.

42. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?-- ದುಷ್ಟಬುದ್ಧಿ ಮತ್ತು ಧರ್ಮಬುದ್ದಿಯ ನಡುವಿನ ವ್ಯಾಜ್ಯವನ್ನು ಪರಿಹರಿಸಲು ಬಂದರು.

43. ಸುಕುಮಾರಸ್ವಾಮಿಯ ತಂದೆತಾಯಿಯಗಳ ಹೆಸರು ಏನು?--ಸೂರದತ್ತ ಮತ್ತು ಯಶೋಭದ್ರೆ.

44. ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?-- ಸೆಟ್ಟಿಯ ಪಟ್ಟವನ್ನು ಕಟ್ಟಲಾಯಿತು.

45. ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?-- ಸುಕುಮಾರ ಸ್ವಾಮಿಯು ಯಾವಾಗ ಋಷಿಗಳನ್ನು ಕಾಣುತ್ತಾನೆಯೋ ಅಂದು ತಪಸ್ಸಿಗೆ ಹೊರಡುತ್ತಾನೆ ಎಂದು.

(ಗದ್ಯಭಾಗಕ್ಕೆ ಸೀಮಿತವಾಗಿರುವ 26 ಅಂಕಗಳಲ್ಲಿ 5 ಅಂಕಗಳನ್ನು ಸುಲಭವಾಗಿ ಗಳಿಸಿರಿ.)

1 comment:

  1. It is very nice 👍 I like it in this having all Questions and Answers 😉 it's very good 👍 💯

    ReplyDelete