Monday 14 January 2019

ಒಂದು ಪುಟ ನಾಲ್ಕು ಅಂಕ


ಪದ್ಯ/ಪೂರಕ ಅಧ್ಯಯನ ಭಾಗದಿಂದ ನಾಲ್ಕು ಅಂಕಗಳನ್ನು ಸುಲಭವಾಗಿ ಪಡೆಯಲು ಸಿದ್ಧರಾಗಿ
1.   ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು?
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮನ್ನಡೆಸಬೇಕು.
2.  ನದೀಜಲಗಳು ಏನಾಗಿವೆ?
ಕಲುಷಿತವಾಗಿವೆ.
3.  ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
4.  ಕಾಡುಮೇಡುಗಳ ಸ್ಥಿತಿ ಹೇಗಿದೆ?
ಬರಡಾಗಿವೆ.
5.  ಯಾವ ಎಚ್ಚರದೊಳು ಬದುಕಬೇಕಿದೆ?
ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕಿದೆ.
6.  ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
ಹಕ್ಕಿಯು ಎವೆ ತೆರೆದಿಕ್ಕುವ ಹೊತ್ತಿನೊಳಗೆ ಅಂದರೆ ಕಣ್ಣು ರೆಪ್ಪೆ ಮಿಟುಕಿಸುವಷ್ಟು ಸಮಯದಲ್ಲಿ (ನಿಮಿಷದಲ್ಲಿ) ಗಾವುದ ಗಾವುದ ಗಾವುದ ಮುಂದೆ ಹಾರುತ್ತಿದೆ.
7.  ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
ಬಿಳಿಯ ಹೊಳೆಯುವ ಬಣ್ಣಗಳಿವೆ.
8.  ಹಕ್ಕಿಯು ಕಣ್ಣುಗಳು ಯಾವುವು?
ಸೂರ್ಯ ಚಂದ್ರರು
9.  ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.
10. ಹಕ್ಕಿ ಯಾರನ್ನು ಹರಸಿದೆ?
ಹೊಸಗಾಲದ ಹಸುಮಕ್ಕಳನ್ನು ಹರಸಿದೆ.
11.  ಹಕ್ಕಿಯು ಯಾವುದರ ಸಂಕೇತವಾಗಿದೆ?
ಕಾಲಪಕ್ಷಿಯ ಸಂಕೇತವಾಗಿದೆ.
12. ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ?--ದಿಙ್ಮಂಡಲಗಳ ಅಂಚಿನ ಆಚೆಯವರೆಗೂ ಚಾಚಿವೆ.
13. ಹಲಗಲಿಯ ಗುರುತು ಉಳಿಯದಂತಾದುದು ಏಕೆ?
ಹಲಗಲಿಯ ಮೇಲೆ ಬ್ರಿಟಿಷ್ ಸರ್ಕಾರದ ದಂಡು ದಾಳಿ ಮಾಡಿ, ಬೆಂಕಿ ಹಚ್ಚಿದ್ದರಿಂದ ಹಲಗಲಿಯ ಗುರುತು ಉಳಿಯದಂತಾಯಿತು.
14. ಹಲಗಲಿ ಗ್ರಾಮವು ಎಲ್ಲಿದೆ?
ಮುಧೋಳ ಸಂಸ್ಥಾನದಲ್ಲಿದ್ದು ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.
15. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
ಹಲಗಲಿಯ ಭಂಟರ ಹತಾರ ಕದನ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.
16. ಹಲಗಲಿಯ ನಾಲ್ವರು ಪ್ರಮುಖರು ಯಾರು?
ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಈ ನಾಲ್ವರು ಹಲಗಲಿಯ ಪ್ರಮುಖರು.
17. ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?
ಕುಂಪಣಿ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶವನ್ನು ಹೊರಡಿಸಿತು.
18. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಏನೆಂದು ಕರೆದನು?
ಕರ್ಣ ನಿಮ್ಮಲ್ಲಿ, ಯಾದವರು ಕೌರವರಲ್ಲಿ ಭೇದವಿಲ್ಲ. ಹೇಳುವುದಾದರೆ ವಂಶದಲ್ಲಿ ಮೊದಲೆರಡಿಲ್ಲ ನಿನ್ನಾಣೆ. ರಾಜ ನೀನು, ಮನದಲ್ಲಿ ನಡೆದುದರ ಅರಿವಿಲ್ಲ‛ ಎಂದು ಹೇಳುತ್ತಾ ಕರೆದನು.
19. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು?
ಶ್ರೀಕೃಷ್ಣನು ಕರ್ಣನ ಸಂಗಡ ಮೈದುನತನದ ಸರಸವನ್ನು ಮಾಡಿ, ಕೈಹಿಡಿದು ಎಳೆದು, ತೊಡೆ ತಾಗುವಂತೆ ರಥದ ಪೀಠದಲ್ಲಿ ಕೂರಿಸಿಕೊಂಡನು.
20. ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ಯಾರು?
ನಕುಲ ಮತ್ತು ಸಹದೇವ.
21. ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತಿದೆ?
ಗಿಳಿ ಹಸುರಿನಂತಿದೆ.
22. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ?
ಬನದ ಅಂಚಿನಲ್ಲಿದೆ.
23. ‘ಹಸುರು’ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ?
ಶ್ವಯುಜ ಮಾಸದ ನವರಾತ್ರಿಯ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ.
24. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ?
ಮಕಮಲ್ಲಿನ ಹೊಸಪಚ್ಚೆಯ ಜಮಖಾನದಂತೆ ಕಂಡಿದೆ.
25. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನನು ಯಾರಿಗೆ ಹೇಳುವನು?
ಭೀಷ್ಮನಿಗೆ ಹೇಳುವನು.
26. ದಿನಪಸುತ ಎಂದರೆ ಯಾರು?
ಕರ್ಣ.
27. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಹೇಳುತ್ತಾನೆ?
ಅರ್ಜುನ ಮತ್ತು ಭೀಮರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಹೇಳುತ್ತಾನೆ.
28. ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ಯಾರು?
ದುರ್ಯೋಧನ.
29. ಅಂತಕಾತ್ಮಜ ಎಂದರೆ ಯಾರು?
ಧರ್ಮರಾಯ.
30. ಯಜ್ಞಾಶ್ವವನ್ನು ಕಟ್ಟಿದವರು ಯಾರು?
ಲವ.
31. ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು?
ತನ್ನ ಉತ್ತರೀಯದಿಂದ ಕಟ್ಟಿದನು.
32. ಮುನಿಸುತರು ಹೆದರಲು ಕಾರಣವೇನು?
ಲವನು ಯಜ್ಞಾಶ್ವವನ್ನು ಕಟ್ಟಿ ಹಾಕಿದುದು.
33. ದ್ರೋಣನು ಪರಶುರಾಮನಲ್ಲಿಗೆ ಏಕೆ ಬಂದನು?
ದ್ರವ್ಯಾರ್ಥಿಯಾಗಿ ಬಂದನು.
34. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?
ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು.
35. ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು?
ವಾರುಣ, ವಾಯವ್ಯ, ಆಗ್ನೇ, ಐಂದ್ರಾ ಮೊದಲಾವು.
36. ದ್ರುಪದನು ಪಡಿಯನಿಗೆ ಏನೆಂದು ಹೇಳಿ ಕಳುಹಿಸಿದನು?
ದ್ರೋಣನು ಯಾರೆಂದು ನಾನು ತಿಳಿಯೆನು, ಅವನನ್ನು ಹೊರಗೆ ತಳ್ಳು‛ ಎಂದು ಹೇಳಿ ಕಳುಹಿಸಿದನು.
37. ಪುಟ್ಟಪೋರಿ ಏನು ಮಾಡುತ್ತಿದ್ದಾಳೆ?
ಮುಸುರೆ ತಿಕ್ಕುತ್ತಿದ್ದಾಳೆ.
38. ಅಮ್ಮ ಎಲ್ಲಿ ಮಲಗಿದ್ದಾಳೆ?
ಗುಡಿಸಲಿನಲ್ಲಿ ಮಲಗಿದ್ದಾಳೆ.
39. ಯಾರಿಗೆ ವಸಂತ ಮುಖ ತೋರಲಿಲ್ಲ?
ಕಮ್ಮಾರನಿಗೆ, ಕುಂಬಾರನಿಗೆ, ನೇಕಾರನಿಗೆ, ಕೇರಿಯ ಮಾರನಿಗೆ ವಸಂತ ಮುಖ ತೋರಲಿಲ್ಲ.
40. ಪುಟ್ಟಿಯ ಪ್ರಶ್ನೆಗಳೇನು?
ಗುಡಿಸಲೊಳಗೆ ಬರಲು ವಸಂತ ಹೆದರಿದನೆ? ಹರಿದ ಚಿಂದಿ ಬಟ್ಟೆಗಳನ್ನು ಕಂಡು ಅವನು ಮರುಗಿದನೆ? ಎಂಬುದು ಪುಟ್ಟಿಯ ಪ್ರಶ್ನೆಗಳು
*******

No comments:

Post a Comment