Friday, 14 December 2018
Tuesday, 27 November 2018
Sunday, 12 August 2018
ಮೆರೆಯುತಿಹರು
ಬುದ್ಧಿಜೀವಿಯ ಮುಖವಾಡ ಧರಿಸಿ
ಮುಗ್ಧಮನಸ್ಸುಗಳ ದಿಕ್ಕನೇ ಕೆಡೆಸಿ
ವ್ಯವಸ್ಥೆಯನೇ ಬುಡಮೇಲುಗೊಳಿಸಿ
ಸ್ವಾರ್ಥದಿಂ ಮೆರೆಯುತಿಹರು ನನಕಂದ||
ಮುಗ್ಧಮನಸ್ಸುಗಳ ದಿಕ್ಕನೇ ಕೆಡೆಸಿ
ವ್ಯವಸ್ಥೆಯನೇ ಬುಡಮೇಲುಗೊಳಿಸಿ
ಸ್ವಾರ್ಥದಿಂ ಮೆರೆಯುತಿಹರು ನನಕಂದ||
ಭೇದವೆತ್ತಣದೊ
ಭೂಮಿತಾಯ ಕುಡಿಗಳಾಗಿ ಜನಿಸಿ
ವಾಯುವಿನನುಗ್ರದಿಂ ಉಸಿರಾಡಿ
ಜಲದೇವಿಯ ಕೃಪೆಯಿಂ ಬಾಳುತಿಹ
ನರರಲಿ ಭೇದವೆತ್ತಣದೊ ನನಕಂದ||
ವಾಯುವಿನನುಗ್ರದಿಂ ಉಸಿರಾಡಿ
ಜಲದೇವಿಯ ಕೃಪೆಯಿಂ ಬಾಳುತಿಹ
ನರರಲಿ ಭೇದವೆತ್ತಣದೊ ನನಕಂದ||
Friday, 10 August 2018
ರೂಪಣಾತ್ಮಕ – 1 ನೀಲ ನಕಾಶೆ, ಪ್ರಶ್ನೆ ಪತ್ರಿಕೆ
ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ರೂಪಣಾತ್ಮಕ ಮೌಲ್ಯಮಾಪನ - 1
10 ನೆಯ ತರಗತಿ ಪ್ರಥಮ ಭಾಷೆ ಕನ್ನಡ - ಲಿಖಿತ ಪರೀಕ್ಷೆ- ಪ್ರಶ್ನೆ ಪತ್ರಿಕೆ
ಸಮಯ : 45 ನಿಮಿಷಗಳು ಗರಿಷ್ಠ ಅಂಕಗಳು : 20
ಸೂಚನೆಗಳು :
ಪ್ರಶ್ನೆ ಪತ್ರಿಕೆಯು ಎ, ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
ವಿಭಾಗ `ಎ’ ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 15 ಅಂಕಗಳು.
ವಿಭಾಗ `ಬಿ’ ಆನ್ವಯಿಕ ವ್ಯಾಕರಣ 03 ಅಂಕಗಳು.
ವಿಭಾಗ `ಸಿ’ ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ್ಯ 02 ಅಂಕಗಳು.
ಭಾಗ - `ಎ’
(ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 15 ಅಂಕಗಳು)
ಕೊಟ್ಟಿರುವ ಪ್ರತಿಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ. 3 X 1=3
1. ‘ಬ್ಲಾಕ್ ಔಟ್’ ನಿಯಮವೆಂದರೇನು?
2. ಕವಿ ಶಿವರುದ್ರಪ್ಪನವರು
ಯಾವುದನ್ನು ಎಚ್ಚರದಲಿ ಮುನ್ನಡೆಸೋಣವೆಂದಿದ್ದಾರೆ?
3. ವಿವೇಕಾನಂದರು ಯಾವುದರ ರೂಪಕವಾಗಿದ್ದಾರೆ?
ಕೊಟ್ಟಿರುವ ಪ್ರತಿಪ್ರಶ್ನೆಗೂ ಮೂರು / ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. 2 X 2=4
4. ಬೇಂದ್ರೆಯವರು ಕಾಲಪಕ್ಷಿಯ
ಬೃಹತ್ ರೂಪವನ್ನು ಹೇಗೆ ನಿರೂಪಿಸಿದ್ದಾರೆ?
5. ಸೈನಿಕರ ಉಡುಪಿನಲ್ಲಿ ಬಂದವರು
ಮುದುಕಿಯ ಮನೆಯಿಂದ ನಿಶ್ಶಬ್ದವಾಗಿ ಹೊರನಡೆದರೇಕೆ?
ಕೊಟ್ಟಿರುವ ಪ್ರತಿಹೇಳಿಕೆಯನ್ನೂ ಸಂದರ್ಭದೊಡನೆ ವಿವರಿಸಿರಿ. 1 X 2=2
6. “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?”
ಅಥವಾ
“ಮುಂಗಾರಿನ ಮಳೆಯಾಗೋಣ.”
ಕೊಟ್ಟಿರುವ ಲೇಖಕರ / ಕವಿಗಳ ಕಾಲ, ಸ್ಥಳ ಮತ್ತು ಕೃತಿಯನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ. 1 X 2=2
7. ದ.ರಾ ಬೇಂದ್ರೆ ಅಥವಾ ಪು.ತಿ.ನ.
ಕೊಟ್ಟಿರುವ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ. 1 X 2=2
8. ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?
ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿರಿ. 1 X 2=2
9. ಕಲುಷಿತವಾದೀ ______________________
_________________________________
_________________________________
________________________ ಮುಟ್ಟೋಣ
ಅಥವಾ
ಮತಗಳೆಲ್ಲವೂ _______________________
__________________________________
__________________________________
_____________________________ ಬಿತ್ತೋಣ
ಭಾಗ - `ಬಿ’
(ಆನ್ವಯಿಕ ವ್ಯಾಕರಣ – 03 ಅಂಕಗಳು)
ಕೊಟ್ಟಿರುವ ಪ್ರತಿಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಸರಿಯಾದ ಆಯ್ಕೆಯನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ. 3X=3
10. ‘ಮನ್ವಂತರ’ ಈÀ ಸಂಧಿಗೆ ಉದಾಹರಣೆಯಾಗಿದೆ:
(ಎ)ವೃದ್ಧಿ (ಬಿ) ಯಣ್
(ಸಿ) ಗುಣ (ಡಿ) ಜಸ್ತ್ವ
11. ‘ಬಟ್ಟಬಯಲು’ ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ:
(ಎ) ದ್ವಿರುಕ್ತಿ (ಬಿ) ಜೋಡುನುಡಿ (ಸಿ) ನುಡಿಗಟ್ಟು (ಡಿ) ಅನುಕರಣಾವ್ಯಯ
12. ಎರಡು ಅಥವಾ ಎರಡಕ್ಕಿಂತ
ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿದಾಗ ಆಗುವುದು:
(ಎ) ಪ್ಲುತಾಕ್ಷರ (ಬಿ) ಗುಣಿತಾಕ್ಷರ (ಸಿ) ಸಂಯುಕ್ತಾಕ್ಷರ (ಡಿ) ವರ್ಣಮಾಲೆ
ಭಾಗ - `ಸಿ’
(ವಾಕ್ಯರಚನೆ ಹಾಗೂ ಬರೆವಣಿಗೆ
ಕೌಶಲ್ಯ 02 ಅಂಕಗಳು)
13. ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ. 1 X 2=2
·
ಮನಸಿದ್ದರೆ ಮಾರ್ಗ.
·
ತಾಳಿದವನು ಬಾಳಿಯಾನು.
ಅಥವಾ
ನಿಮ್ಮನ್ನು ದಾವಣಗೆರೆಯ ಹರಿಹರೇಶ್ವರ ಪ್ರೌಢಶಾಲೆಯ ಕವಿತ/ಕಾರ್ತಿಕ್ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಆಚರಿಸಿದ
‘ಪ್ರತಿಭಾ ಪುರಸ್ಕಾರ’ ಸಮಾರಂಭದ ವರದಿಯನ್ನು ಪ್ರಕಟಿಸುವಂತೆ ಕೋರಿ ವಿಜಯವಾಣಿ ದಿನಪತ್ರಿಕೆಯ ಸಂಪಾದಕರಿಗೆ ಒಂದು ಮನವಿ
ಪತ್ರ ಬರೆಯಿರಿ.
***************
Monday, 30 July 2018
ಈಗಿನ ಶಿಕ್ಷಣ
ಪರೀಕ್ಷೆಗಳ ಹಿಂದೆ ಹಿಂದೆಯೇ ಓಟ ಪಾಠ
ಪಾಸಿಂಗ್ ಪ್ಯಾಕೇಜುಗಳ ಭರದ ಓಡಾಟ
ಅಂಕಗಳಿಕೆಗಾಗಿಯೇ ಸಕಲರ ಪರದಾಟ
ಇದು ಈಗಿನ ಶಿಕ್ಷಣದ ನೋಟ ನನ ಕಂದ||
ಪಾಸಿಂಗ್ ಪ್ಯಾಕೇಜುಗಳ ಭರದ ಓಡಾಟ
ಅಂಕಗಳಿಕೆಗಾಗಿಯೇ ಸಕಲರ ಪರದಾಟ
ಇದು ಈಗಿನ ಶಿಕ್ಷಣದ ನೋಟ ನನ ಕಂದ||
Friday, 27 July 2018
Wednesday, 25 July 2018
ನಿನ್ನ ನೀ ಅರಿ
ನನ್ನವರು ನನ್ನರಿಯಲಾರದೆ ಹೋದರೆನ್ನದಿರು
ನಿನ್ನವರ ನೀನರಿತುದೆಷ್ಟೆಂದು ತಿರುಗಿ ನೋಡು
ನನ್ನನರಿತವರಿಹರಿನ್ನೆಲೋ ಎನುತೋಡದಿರು
ನಿನ್ನ ನೀ ಅರಿತು ನಡೆವುದನು ಕಲಿ ನನಕಂದ||
ನಿನ್ನವರ ನೀನರಿತುದೆಷ್ಟೆಂದು ತಿರುಗಿ ನೋಡು
ನನ್ನನರಿತವರಿಹರಿನ್ನೆಲೋ ಎನುತೋಡದಿರು
ನಿನ್ನ ನೀ ಅರಿತು ನಡೆವುದನು ಕಲಿ ನನಕಂದ||
ನರರ ನರ್ತನ
ವರ್ತಮಾನದಲಿ ಭೂತವ ಬೆದಕಿ ಭವಿಷ್ಯವನೆದುರು ನೋಡುತ
ಕರ್ತವ್ಯವ ತೂಗುವುಯ್ಯಾಲೆಯಲಿರಿಸಿ ಅನುಗಾಲವೂ ತೂಗುತ
ಮರ್ತ್ಯಲೋಕದ ಸುಖವೆಲ್ಲವೂ ತನಗೆ ಬೇಕೆಂದೆನುತ ಬಯಸುತ
ನರ್ತನವ ಮಾಡುತಿಹರೀ ನರರು ಲೋಕದಲಿ ನಿತ್ಯ - ನನಕಂದ||
ಕರ್ತವ್ಯವ ತೂಗುವುಯ್ಯಾಲೆಯಲಿರಿಸಿ ಅನುಗಾಲವೂ ತೂಗುತ
ಮರ್ತ್ಯಲೋಕದ ಸುಖವೆಲ್ಲವೂ ತನಗೆ ಬೇಕೆಂದೆನುತ ಬಯಸುತ
ನರ್ತನವ ಮಾಡುತಿಹರೀ ನರರು ಲೋಕದಲಿ ನಿತ್ಯ - ನನಕಂದ||
Sunday, 22 July 2018
ಅವಿಶ್ವಾಸ ವೇ ವಿಶ್ವಾಸ
ಮಾತಿನ ಚಕಮಕಿಯಲಿ ಸಲ್ಲದ ವಾಕ್ಝರಿಯಬ್ಬರ
ಲೋಕಸಭೆಯಲಿ ಅವಿಶ್ವಾಸ ನಿರ್ಣಯದ ಭರ
ಕುಡಿಗಣ್ಣಿನ ನೋಟ ಆತ್ಮೀಯತೆಯ ಆಲಿಂಗನ
ಮೋದಿಯನು ಜನರೆಡೆಗೆ ಕರೆತಂದಿತಲಾ ನನಕಂದ||
ಲೋಕಸಭೆಯಲಿ ಅವಿಶ್ವಾಸ ನಿರ್ಣಯದ ಭರ
ಕುಡಿಗಣ್ಣಿನ ನೋಟ ಆತ್ಮೀಯತೆಯ ಆಲಿಂಗನ
ಮೋದಿಯನು ಜನರೆಡೆಗೆ ಕರೆತಂದಿತಲಾ ನನಕಂದ||
ಒಂದೆಂದು ಕಡೆಗಣಿಸದಿರು
ಒಂದೇ ಒಂದು ಕಿಡಿ ದಳ್ಳುರಿಯಾಗೆಲ್ಲವನು ದಹಿಸುವುದು
ಒಂದೇ ಒಂದು ನುಡಿ ಮನೆಮನಗಳನು ಮುರಿಯುವುದು
ಒಂದೇ ಒಂದು ಆಲೋಚನೆ ಬಾಳಿನಾ ದಿಕ್ಕ ಬದಲಿಪುದು
ಒಂದೇ ಒಂದೆಂದೆನುತ ಕಡೆಗಣಿಸದಿರು ನೀ ನನಕಂದ||
ಒಂದೇ ಒಂದು ನುಡಿ ಮನೆಮನಗಳನು ಮುರಿಯುವುದು
ಒಂದೇ ಒಂದು ಆಲೋಚನೆ ಬಾಳಿನಾ ದಿಕ್ಕ ಬದಲಿಪುದು
ಒಂದೇ ಒಂದೆಂದೆನುತ ಕಡೆಗಣಿಸದಿರು ನೀ ನನಕಂದ||
Friday, 20 July 2018
ಸುಖವನರಸು
ಸುಖವಿಲ್ಲಿಲ್ಲ ಇಹುದಿನ್ನೆಲ್ಲೆಲ್ಲೋ ಎನುತ ಅರಸಿ
ಸುಖಿಸುವೆನಿನ್ನೆಲ್ಲೆಲ್ಲೋ ಎನುತನುಗಾಲ ಭ್ರಮಿಸಿ
ಸುಖವನರಸರಸಿ ಅಂಡಲೆಯುತ ಕುದಿಯದಿರು
ಸುಖವಿಹುದು ನಿನ್ನೊಳಗದನರಸು ನನಕಂದ||
Friday, 13 July 2018
ಹಾಸ್ಯದೌತಣ
ರಾಶಿಯ ಕೊರವಂಜಿ ಅವಳತಂಗಿ ಅಪರಂಜಿಯ ಹಾಸ್ಯದ ಹೊನಲು
ಬೀchi, ಕೈಲಾಸಂ, ನಾ ಕಸ್ತೂರಿಯವರ ಚತುರೋಕ್ತಿಯ ನಗೆಗಡಲು
ನಗೆರಾಯಭಾರಿ ತುಮಕೂರಿನ ಮುಗುಳು ನಗೆಯ ‘ನಗೆಮುಗುಳು’
ನಗೆ ಸಾಹಿತ್ಯೋ ಪಾಸಕರಿಗೆ ಹಾಸ್ಯದೌತಣವ ಬಡಿಸಿಹುದು-ನನಕಂದ||
Thursday, 12 July 2018
ನರರು ನಲುಗುವರು
ಮರಳಿನಲಿ ಮನೆಕಟ್ಟಿ ಸಿಂಗರಿಸಿ ಸಂತಸದಿ ನಲಿಯುತಿರೆ
ಸುರಿವ ಮಳೆಗೆ ಕಣ್ಣೆದುರೆ ಮನೆಯು ಕೊಚ್ಚಿಹೋಗುತ್ತಿರೆ
ಕರ ಹಿಸುಕಿಗೊಳುತ ದುಃಖಿಸುವ ಮುಗ್ಧ ಬಾಲಕರವೊಲ್
ನರರು ನಲುಗುವರು ಬಾಳಿನಾಟವು ಕುಸಿಯೆ ನನಕಂದ||
Sunday, 8 July 2018
ಭಾವಪೂರ್ವಕ ಶ್ರದ್ಧಾಂಜಲಿ
ಕಾಯಕದಲಿ
ಕಾಯವ ಗಟ್ಟಿಗೊಳಿಸಿ
ಕರ್ಮಯೋಗವ
ತಾ ನಂಬಿ
ತನ್ನೆಲ್ಲ
ಕಾರ್ಯವ ತಾನೇ ಎಸಗುತ
ಕರ್ಮ
ಯೋಗಿಯಂತೆ ಬದುಕಿದಾಕೆ;
ತನ್ನ
ಸಿದ್ಧಾಂತಗಳಿಗೆ ತಾ ಬದ್ಧರಾಗಿ
ತನ್ನಂತೆ
ತಾನಿದ್ದು ಕೊನೆವರೆಗೂ
ತನ್ನ
ತನುಮನವನು ಅದಕೆ ಅಣಿಗೊಳಿಸಿ
ತನ್ನತನದೊಡನೆ
ಸದಾ ಬದುಕಿದಾಕೆ;
ಮಕ್ಕಳು
ಮರಿಗಳ ಅಕ್ಕರೆಯಿಂದ ಸಲಹುತ
ಬಸುರಿ
ಬಾಣಂತಿಯರ ಆರೈಕೆ ಮಾಡುತ
ಅನಾರೋಗ್ಯದಿಂದ
ಬಳಲುವವರ ಸಂತೈಸುತ
ತನ್ನವರ
ಸೇವೆಗೆ ಮುಂದಾಗಿ ಬದುಕಿದಾಕೆ;
ತನ್ನೊಲವಿನ
ಬಂಧು ಮಿತ್ರರ ತಪ್ಪು ಒಪ್ಪುಗಳ ಮನ್ನಿಸುತ
ಅವರ
ಯೋಗಕ್ಷೇಮಕೆ ಕಟಿಬದ್ಧಳಾಗಿ ಅನವರತ ನಿಂತು
ಕಿಂಚಿತ್ತು
ಚ್ಯುತಿ ಬಾರದಂತೆ ಎಚ್ಚರದಿ ಕಾರ್ಯ ನಿರತಳಾಗಿ
ಬದಕ
ಹಸನಗೊಳಿಸೆ ತುಡುಕಿ ಬದುಕಿದಾಕೆ;
ಸೋದರಿಯ
ಮಕ್ಕಳ ಅಕ್ಕರೆಯಿಂದ ಸಾಕಿ ಸಲಹಿ
ಸೋದರನಿಗೆ
ತನ್ನೆಲ್ಲವನೂ ಧಾರೆಯೆರೆದು
ತವರು
ಮನೆಯೇಳ್ಗೆಯ ಮನಸಾರೆ ಬಯಸುತ
ಭ್ರಾತೃ
ಪ್ರೇಮದಿ ಪರಾಕಾμÉ್ಠಯ ಮೀರಿದಾಕೆ;
ಕೌತುಕಗಳಲಿ
ಕುತೂಹಲವ ತಳೆದು
ವಿಸ್ಮಯಗಳನು
ವಿಸ್ಮಯದಿಂದ ನೋಡಿ
ಹಾಡು
ಹಸೆಯ ಮನಸಾರೆ ಮೆಚ್ಚುತ
ಹಬ್ಬ
ಹರಿದಿನವ ಬಿಡದೆ ಮಾಡಿದಾಕೆ;
ಚಸ್ಮದ
ಮೊರೆಯಿಲ್ಲದೆ ಕೊನೆಯವರೆಗು ಓದಿಬರೆದು
ಆರೋಗ್ಯ
ಸಲಹೆಗಳ ಕಾಳಜಿಯಿಂದ ಸಂಗ್ರಹಿಸುತ
ಬಿಡದೆ
ಆರೋಗ್ಯದ ಕಡೆಗೆ ಗಮನನೀಡಿ
ಜತನದಿಂದ
ತನ್ನಾರೋಗ್ಯವ ತಾ ಕಾಯ್ದುಕೊಂಡಾಕೆ;
ಒಡವೆ
ವಸ್ತ್ರ ಆಸ್ತಿಯ ಮೋಹ ಕಿಂಚಿತ್ತಿಲ್ಲದೆ
ಒಡನಾಡಿಗಳಲಂಕಾರವ
ಮನಸಾರೆ ಮೆಚ್ಚಿ
ಒಡಹುಟ್ಟಿದವರ
ಒಳಿತನೇ ತಾ ನಿತ್ಯ ಬಯಸಿ
ಒಡಲ
ಸಂಕಟವ ಮರೆಮಾಚಿ ಬಾಳದೂಡಿದಾಕೆ;
ಸ್ವಚ್ಛತೆಗೆ
ಕೊನೆಯವರೆಗು ಆದ್ಯತೆಯ ನೀಡಿ
ವಸ್ತು
ವಾಸ್ತವ್ಯಗಳನು ಒಪ್ಪಗೊಳಿಸಿ
ಚಿಂದಿ
ಬಟ್ಟೆ-ಬರಿಯನು ಬಿಡದೆ ಸ್ವಚ್ಛಗೊಳಿಸಿ
ಶುಭ್ರತೆಗೆ
ಮತ್ತೊಂದು ಹೆಸರಾದಾಕೆ;
ಹಪ್ಪಳ
ಸಂಡಿಗೆ ಉಪ್ಪಿನಕಾಯಿ ಬಾಳಕವ ಸಿದ್ಧಗೊಳಿಸಿ
ಬೋಂಡ
ಪಕೋಡ ಚಕ್ಕುಲಿ ಕೋಡುಬಳೆಗಳನು ಇಚ್ಛಿಸಿ
ಒಳ್ಳೆಣ್ಣೆಯೊಂದಿಗೆ
ಉಪ್ಪಿನಕಾಯಿ ಚಟ್ನಿಪುಡಿ ಗೊಜ್ಜಮಿದ್ದು
ಕಾಳುಹುಳಿ
ಹಾಲುಬಾಯಿ ಸವಿಯ ಬಯಸಿದಾಕೆ;
ಶ್ರೀನಿವಾಸಜೋಯಿಸರ
ಮಡದಿಯಾಗಿ
ಪುರಾಣಿಕರ
ಆಸರೆಯಲಿ ಬಾಳಿ ಬದುಕಿ
ನಿಂಗು,
ಅಮ್ಮ, ಅಜ್ಜಿ, ಗಿಂಡಿಅಜ್ಜಿ, ನಾಗರತ್ನಳಾಗಿ
ಯಾರಿಗೂ
ಯಾವುದಕು ಎಂದೆಂದೂ ತಲೆಬಾಗದೆ
ಯಾರಿಗೂ
ಯಾವುದಕು ಹೊರೆಯಾಗದಂತೆ ಬದುಕಿದ
ಅವರಾತ್ಮಕೆ
ಚಿರ ಶಾಂತಿ ದೊರಕಲಿ
ಅವರು
ಬಯಸಿದ ಮುಕ್ತಿ ಸಿಗಲಿ.
*************
ಕಾರ್ಯಗಳ ಫಲ
ಹಿಟ್ಟೊಂದೆ ಹದವೊಂದೆ ಬಳಪ ಕರಣಗಳೊಂದೆ
ಅಟ್ಟಡುಗೆಗಳ ವಿಧಿವಿಧಾನಗಳೆಲ್ಲವೂ ತಾನೊಂದೆ
ಕಟ್ಟಕಡೆಗೆ ಪರಿಮಳವು ತಾನೊಂದೆ ರುಚಿಮಾತ್ರ
ಬೇರೆ
ಕಾರ್ಯಗಳ ಫಲವು ಮನಸ್ಸಿನ ಸ್ಥತಿಯಂತೆ ನನಕಂದ||
‘ಬೆಕ್ಕು ಹಾರುತಿದೆ ನೋಡಿದಿರಾ?’
ಬೇಂದ್ರೆಯವರು ‘ಹಕ್ಕಿ ಹಾರುತಿದೆ
ನೋಡಿದಿರಾ?’ ಎಂಬ ತಮ್ಮ ಕವನವನ್ನು ಅಣಗಿಸಿ ‘ಬೆಕ್ಕು ಹಾರುತಿದೆ ನೋಡಿದಿರಾ?’ ಎನ್ನುವ ‘ಅಣಕುವಾಡು’
ಕವನವನ್ನು ಬರೆದರು.
ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||
ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||
ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||
ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||
ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||
ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||
ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||
ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||
ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||
ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||
ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||
ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||
ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||
ಚಿತ್ರ : ಗೂಗಲ್ ಕೃಪೆ
Saturday, 7 July 2018
ವಿಧಿಯಿಚ್ಛೆಯ ಮೀರಲಾದೀತೆ
ವಿಧವಿಧದಾಟಗಳನು ಹೂಡುತ ಮಾಯಾ ಮುಸುಕೆಳೆದು
ವಿಧವಿಧ ಆಲೋಚನೆಗಳನು ಮನದೊಳಗೆ ಕೆರಳಿಸುತ
ವಿಧೇಯರಂತಾತನಾಣತಿಯ ಪಾಲಕರನ್ನಾಗಿಸುವನು
ವಿಧಿರಾಯನಿಚ್ಛೆಯನೆಂತು ಮೀರಲಾದೀತು ನನಕಂದ||
Wednesday, 4 July 2018
ತಡೆವುದತೆಂತು
ಮೋಹದಾ ಪಾಶ ಬಿಗಿ ಬಿಗಿದು ಉರುಳಾಗಿ ಸುತ್ತುತಿರೆ
ಮೋಡಿಗೊಳಿಪ ಸವಿಸವಿಯ ನುಡಿಗಳು ಕಟ್ಟಿಹಾಕುತಿರೆ
ಮಾಟದ ಕಾಟ ಕಾಣದಂತೆ ಬೆಂಬಿಡದೆ ಸೆಳೆದು ಕಾಡುತಿರೆ
ಜೌವನದ ಸೊಕ್ಕಿನುದ್ವೇಗವ ತಡೆವುದತೆಂತು ನನಕಂದ||
Subscribe to:
Posts (Atom)