ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ, ಮಲ್ಲೇಶ್ವರಂ, ಬೆಂಗಳೂರು-03
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ರೂಪಣಾತ್ಮಕ ಮೌಲ್ಯಮಾಪನ - 1
10 ನೆಯ ತರಗತಿ ಪ್ರಥಮ ಭಾಷೆ ಕನ್ನಡ - ಲಿಖಿತ ಪರೀಕ್ಷೆ- ಪ್ರಶ್ನೆ ಪತ್ರಿಕೆ
ಸಮಯ : 45 ನಿಮಿಷಗಳು ಗರಿಷ್ಠ ಅಂಕಗಳು : 20
ಸೂಚನೆಗಳು :
ಪ್ರಶ್ನೆ ಪತ್ರಿಕೆಯು ಎ, ಬಿ ಮತ್ತು ಸಿ ಎಂಬ ಮೂರು ಭಾಗಗಳನ್ನು ಒಳಗೊಂಡಿದೆ.
ವಿಭಾಗ `ಎ’ ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 15 ಅಂಕಗಳು.
ವಿಭಾಗ `ಬಿ’ ಆನ್ವಯಿಕ ವ್ಯಾಕರಣ 03 ಅಂಕಗಳು.
ವಿಭಾಗ `ಸಿ’ ವಾಕ್ಯರಚನೆ ಹಾಗೂ ಬರೆವಣಿಗೆ ಕೌಶಲ್ಯ 02 ಅಂಕಗಳು.
ಭಾಗ - `ಎ’
(ಪಠ್ಯಗಳ ಅಧ್ಯಯನ (ಗದ್ಯ, ಪದ್ಯ, ಪೋಷಕ ಅಧ್ಯಯನ) 15 ಅಂಕಗಳು)
ಕೊಟ್ಟಿರುವ ಪ್ರತಿಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ. 3 X 1=3
1. ‘ಬ್ಲಾಕ್ ಔಟ್’ ನಿಯಮವೆಂದರೇನು?
2. ಕವಿ ಶಿವರುದ್ರಪ್ಪನವರು
ಯಾವುದನ್ನು ಎಚ್ಚರದಲಿ ಮುನ್ನಡೆಸೋಣವೆಂದಿದ್ದಾರೆ?
3. ವಿವೇಕಾನಂದರು ಯಾವುದರ ರೂಪಕವಾಗಿದ್ದಾರೆ?
ಕೊಟ್ಟಿರುವ ಪ್ರತಿಪ್ರಶ್ನೆಗೂ ಮೂರು / ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ. 2 X 2=4
4. ಬೇಂದ್ರೆಯವರು ಕಾಲಪಕ್ಷಿಯ
ಬೃಹತ್ ರೂಪವನ್ನು ಹೇಗೆ ನಿರೂಪಿಸಿದ್ದಾರೆ?
5. ಸೈನಿಕರ ಉಡುಪಿನಲ್ಲಿ ಬಂದವರು
ಮುದುಕಿಯ ಮನೆಯಿಂದ ನಿಶ್ಶಬ್ದವಾಗಿ ಹೊರನಡೆದರೇಕೆ?
ಕೊಟ್ಟಿರುವ ಪ್ರತಿಹೇಳಿಕೆಯನ್ನೂ ಸಂದರ್ಭದೊಡನೆ ವಿವರಿಸಿರಿ. 1 X 2=2
6. “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆಯುವುದೇ?”
ಅಥವಾ
“ಮುಂಗಾರಿನ ಮಳೆಯಾಗೋಣ.”
ಕೊಟ್ಟಿರುವ ಲೇಖಕರ / ಕವಿಗಳ ಕಾಲ, ಸ್ಥಳ ಮತ್ತು ಕೃತಿಯನ್ನು ಕುರಿತು ವಾಕ್ಯರೂಪದಲ್ಲಿ ಬರೆಯಿರಿ. 1 X 2=2
7. ದ.ರಾ ಬೇಂದ್ರೆ ಅಥವಾ ಪು.ತಿ.ನ.
ಕೊಟ್ಟಿರುವ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ. 1 X 2=2
8. ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?
ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿರಿ. 1 X 2=2
9. ಕಲುಷಿತವಾದೀ ______________________
_________________________________
_________________________________
________________________ ಮುಟ್ಟೋಣ
ಅಥವಾ
ಮತಗಳೆಲ್ಲವೂ _______________________
__________________________________
__________________________________
_____________________________ ಬಿತ್ತೋಣ
ಭಾಗ - `ಬಿ’
(ಆನ್ವಯಿಕ ವ್ಯಾಕರಣ – 03 ಅಂಕಗಳು)
ಕೊಟ್ಟಿರುವ ಪ್ರತಿಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಸರಿಯಾದ ಆಯ್ಕೆಯನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ. 3X=3
10. ‘ಮನ್ವಂತರ’ ಈÀ ಸಂಧಿಗೆ ಉದಾಹರಣೆಯಾಗಿದೆ:
(ಎ)ವೃದ್ಧಿ (ಬಿ) ಯಣ್
(ಸಿ) ಗುಣ (ಡಿ) ಜಸ್ತ್ವ
11. ‘ಬಟ್ಟಬಯಲು’ ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ:
(ಎ) ದ್ವಿರುಕ್ತಿ (ಬಿ) ಜೋಡುನುಡಿ (ಸಿ) ನುಡಿಗಟ್ಟು (ಡಿ) ಅನುಕರಣಾವ್ಯಯ
12. ಎರಡು ಅಥವಾ ಎರಡಕ್ಕಿಂತ
ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿದಾಗ ಆಗುವುದು:
(ಎ) ಪ್ಲುತಾಕ್ಷರ (ಬಿ) ಗುಣಿತಾಕ್ಷರ (ಸಿ) ಸಂಯುಕ್ತಾಕ್ಷರ (ಡಿ) ವರ್ಣಮಾಲೆ
ಭಾಗ - `ಸಿ’
(ವಾಕ್ಯರಚನೆ ಹಾಗೂ ಬರೆವಣಿಗೆ
ಕೌಶಲ್ಯ 02 ಅಂಕಗಳು)
13. ಕೊಟ್ಟಿರುವ ಗಾದೆಗಳಲ್ಲಿ ಯಾವುದಾದರೂ ಒಂದನ್ನು ವಿಸ್ತರಿಸಿ ಬರೆಯಿರಿ. 1 X 2=2
·
ಮನಸಿದ್ದರೆ ಮಾರ್ಗ.
·
ತಾಳಿದವನು ಬಾಳಿಯಾನು.
ಅಥವಾ
ನಿಮ್ಮನ್ನು ದಾವಣಗೆರೆಯ ಹರಿಹರೇಶ್ವರ ಪ್ರೌಢಶಾಲೆಯ ಕವಿತ/ಕಾರ್ತಿಕ್ ಎಂದು ಭಾವಿಸಿಕೊಂಡು, ನಿಮ್ಮ ಶಾಲೆಯಲ್ಲಿ ಆಚರಿಸಿದ
‘ಪ್ರತಿಭಾ ಪುರಸ್ಕಾರ’ ಸಮಾರಂಭದ ವರದಿಯನ್ನು ಪ್ರಕಟಿಸುವಂತೆ ಕೋರಿ ವಿಜಯವಾಣಿ ದಿನಪತ್ರಿಕೆಯ ಸಂಪಾದಕರಿಗೆ ಒಂದು ಮನವಿ
ಪತ್ರ ಬರೆಯಿರಿ.
***************
No comments:
Post a Comment