Monday, 14 January 2019

ಒಂದು ಪುಟ ನಾಲ್ಕು ಅಂಕ


ಪದ್ಯ/ಪೂರಕ ಅಧ್ಯಯನ ಭಾಗದಿಂದ ನಾಲ್ಕು ಅಂಕಗಳನ್ನು ಸುಲಭವಾಗಿ ಪಡೆಯಲು ಸಿದ್ಧರಾಗಿ
1.   ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು?
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮನ್ನಡೆಸಬೇಕು.
2.  ನದೀಜಲಗಳು ಏನಾಗಿವೆ?
ಕಲುಷಿತವಾಗಿವೆ.
3.  ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
4.  ಕಾಡುಮೇಡುಗಳ ಸ್ಥಿತಿ ಹೇಗಿದೆ?
ಬರಡಾಗಿವೆ.
5.  ಯಾವ ಎಚ್ಚರದೊಳು ಬದುಕಬೇಕಿದೆ?
ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕಿದೆ.
6.  ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
ಹಕ್ಕಿಯು ಎವೆ ತೆರೆದಿಕ್ಕುವ ಹೊತ್ತಿನೊಳಗೆ ಅಂದರೆ ಕಣ್ಣು ರೆಪ್ಪೆ ಮಿಟುಕಿಸುವಷ್ಟು ಸಮಯದಲ್ಲಿ (ನಿಮಿಷದಲ್ಲಿ) ಗಾವುದ ಗಾವುದ ಗಾವುದ ಮುಂದೆ ಹಾರುತ್ತಿದೆ.
7.  ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
ಬಿಳಿಯ ಹೊಳೆಯುವ ಬಣ್ಣಗಳಿವೆ.
8.  ಹಕ್ಕಿಯು ಕಣ್ಣುಗಳು ಯಾವುವು?
ಸೂರ್ಯ ಚಂದ್ರರು
9.  ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.
10. ಹಕ್ಕಿ ಯಾರನ್ನು ಹರಸಿದೆ?
ಹೊಸಗಾಲದ ಹಸುಮಕ್ಕಳನ್ನು ಹರಸಿದೆ.
11.  ಹಕ್ಕಿಯು ಯಾವುದರ ಸಂಕೇತವಾಗಿದೆ?
ಕಾಲಪಕ್ಷಿಯ ಸಂಕೇತವಾಗಿದೆ.
12. ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ?--ದಿಙ್ಮಂಡಲಗಳ ಅಂಚಿನ ಆಚೆಯವರೆಗೂ ಚಾಚಿವೆ.
13. ಹಲಗಲಿಯ ಗುರುತು ಉಳಿಯದಂತಾದುದು ಏಕೆ?
ಹಲಗಲಿಯ ಮೇಲೆ ಬ್ರಿಟಿಷ್ ಸರ್ಕಾರದ ದಂಡು ದಾಳಿ ಮಾಡಿ, ಬೆಂಕಿ ಹಚ್ಚಿದ್ದರಿಂದ ಹಲಗಲಿಯ ಗುರುತು ಉಳಿಯದಂತಾಯಿತು.
14. ಹಲಗಲಿ ಗ್ರಾಮವು ಎಲ್ಲಿದೆ?
ಮುಧೋಳ ಸಂಸ್ಥಾನದಲ್ಲಿದ್ದು ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.
15. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
ಹಲಗಲಿಯ ಭಂಟರ ಹತಾರ ಕದನ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.
16. ಹಲಗಲಿಯ ನಾಲ್ವರು ಪ್ರಮುಖರು ಯಾರು?
ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಈ ನಾಲ್ವರು ಹಲಗಲಿಯ ಪ್ರಮುಖರು.
17. ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?
ಕುಂಪಣಿ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶವನ್ನು ಹೊರಡಿಸಿತು.
18. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಏನೆಂದು ಕರೆದನು?
ಕರ್ಣ ನಿಮ್ಮಲ್ಲಿ, ಯಾದವರು ಕೌರವರಲ್ಲಿ ಭೇದವಿಲ್ಲ. ಹೇಳುವುದಾದರೆ ವಂಶದಲ್ಲಿ ಮೊದಲೆರಡಿಲ್ಲ ನಿನ್ನಾಣೆ. ರಾಜ ನೀನು, ಮನದಲ್ಲಿ ನಡೆದುದರ ಅರಿವಿಲ್ಲ‛ ಎಂದು ಹೇಳುತ್ತಾ ಕರೆದನು.
19. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು?
ಶ್ರೀಕೃಷ್ಣನು ಕರ್ಣನ ಸಂಗಡ ಮೈದುನತನದ ಸರಸವನ್ನು ಮಾಡಿ, ಕೈಹಿಡಿದು ಎಳೆದು, ತೊಡೆ ತಾಗುವಂತೆ ರಥದ ಪೀಠದಲ್ಲಿ ಕೂರಿಸಿಕೊಂಡನು.
20. ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ಯಾರು?
ನಕುಲ ಮತ್ತು ಸಹದೇವ.
21. ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತಿದೆ?
ಗಿಳಿ ಹಸುರಿನಂತಿದೆ.
22. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ?
ಬನದ ಅಂಚಿನಲ್ಲಿದೆ.
23. ‘ಹಸುರು’ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ?
ಶ್ವಯುಜ ಮಾಸದ ನವರಾತ್ರಿಯ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ.
24. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ?
ಮಕಮಲ್ಲಿನ ಹೊಸಪಚ್ಚೆಯ ಜಮಖಾನದಂತೆ ಕಂಡಿದೆ.
25. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನನು ಯಾರಿಗೆ ಹೇಳುವನು?
ಭೀಷ್ಮನಿಗೆ ಹೇಳುವನು.
26. ದಿನಪಸುತ ಎಂದರೆ ಯಾರು?
ಕರ್ಣ.
27. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಹೇಳುತ್ತಾನೆ?
ಅರ್ಜುನ ಮತ್ತು ಭೀಮರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಹೇಳುತ್ತಾನೆ.
28. ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ಯಾರು?
ದುರ್ಯೋಧನ.
29. ಅಂತಕಾತ್ಮಜ ಎಂದರೆ ಯಾರು?
ಧರ್ಮರಾಯ.
30. ಯಜ್ಞಾಶ್ವವನ್ನು ಕಟ್ಟಿದವರು ಯಾರು?
ಲವ.
31. ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು?
ತನ್ನ ಉತ್ತರೀಯದಿಂದ ಕಟ್ಟಿದನು.
32. ಮುನಿಸುತರು ಹೆದರಲು ಕಾರಣವೇನು?
ಲವನು ಯಜ್ಞಾಶ್ವವನ್ನು ಕಟ್ಟಿ ಹಾಕಿದುದು.
33. ದ್ರೋಣನು ಪರಶುರಾಮನಲ್ಲಿಗೆ ಏಕೆ ಬಂದನು?
ದ್ರವ್ಯಾರ್ಥಿಯಾಗಿ ಬಂದನು.
34. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?
ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು.
35. ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು?
ವಾರುಣ, ವಾಯವ್ಯ, ಆಗ್ನೇ, ಐಂದ್ರಾ ಮೊದಲಾವು.
36. ದ್ರುಪದನು ಪಡಿಯನಿಗೆ ಏನೆಂದು ಹೇಳಿ ಕಳುಹಿಸಿದನು?
ದ್ರೋಣನು ಯಾರೆಂದು ನಾನು ತಿಳಿಯೆನು, ಅವನನ್ನು ಹೊರಗೆ ತಳ್ಳು‛ ಎಂದು ಹೇಳಿ ಕಳುಹಿಸಿದನು.
37. ಪುಟ್ಟಪೋರಿ ಏನು ಮಾಡುತ್ತಿದ್ದಾಳೆ?
ಮುಸುರೆ ತಿಕ್ಕುತ್ತಿದ್ದಾಳೆ.
38. ಅಮ್ಮ ಎಲ್ಲಿ ಮಲಗಿದ್ದಾಳೆ?
ಗುಡಿಸಲಿನಲ್ಲಿ ಮಲಗಿದ್ದಾಳೆ.
39. ಯಾರಿಗೆ ವಸಂತ ಮುಖ ತೋರಲಿಲ್ಲ?
ಕಮ್ಮಾರನಿಗೆ, ಕುಂಬಾರನಿಗೆ, ನೇಕಾರನಿಗೆ, ಕೇರಿಯ ಮಾರನಿಗೆ ವಸಂತ ಮುಖ ತೋರಲಿಲ್ಲ.
40. ಪುಟ್ಟಿಯ ಪ್ರಶ್ನೆಗಳೇನು?
ಗುಡಿಸಲೊಳಗೆ ಬರಲು ವಸಂತ ಹೆದರಿದನೆ? ಹರಿದ ಚಿಂದಿ ಬಟ್ಟೆಗಳನ್ನು ಕಂಡು ಅವನು ಮರುಗಿದನೆ? ಎಂಬುದು ಪುಟ್ಟಿಯ ಪ್ರಶ್ನೆಗಳು
*******

Sunday, 13 January 2019

ಕಳೆದು ಕೊಳ್ಳದಿರು


ಮರೆಮಾಚಿ ನಿಜರೂಪವ ಸುರದ್ರೂಪವಾ ತಳೆದು ಸವಿಯಾಡುತ
ಮರುಳುಗೊಳಿಸುತೆಲ್ಲವನು ಅಪಹರಿಸಲೋಸುಗ ಹವಣಿಸುತಿಹರು
ಮರುಳಾಗಿ ಮನಸೋತು ನೀ ಮಾಯಾಬಲೆಗೆ ಸಿಲುಕಿ ನಲುಗದಿರು
ಮರುಳುತನದಿ ನಿನ್ನೆಲ್ಲವನು ನೀನೇ ಕಳೆದು ಕೊಳ್ಳದಿರು-ನನಕಂದ||

ಒಂದು ಪುಟ ಐದು ಅಂಕ


ರಾಹಿಲನು ಯಾರು?--ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಒಬ್ಬ ಡಾಕ್ಟರ್.

2.  ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದುದು ಏನು?--ಔಷದ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ

3.  ಗಡಿ ಪ್ರದೇಶದಲ್ಲಿ ಬ್ಲಾಕ್‍ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ?--ರಾತ್ರಿ ವೇಳೆ ಶತ್ರು ಸೈನಿಕರು ವೈಮಾನಿಕ ದಾಳಿ ಮಾಡಲು ಅವಕಾಶವಾಗದಂತೆ ರಕ್ಷಿಸಿಕೊಳ್ಳಲು ಪಾಲಿಸಲಾಗುತ್ತದೆ.

4.  ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು?--ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ ಸಂಕಟಕ್ಕೆ ಈಡಾದ ಮನುಷ್ಯರ ಕಡೆಯುವನು.

5.  ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು?--ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯಮಾಡುವುದೇ ಯುದ್ದ

6.  ಶ್ರೀರಾಮನ ತಂದೆಯ ಹೆಸರು ಏನು?--ದಶರಥ.

7.  ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು? -- ಪರಿಮಳದ ಹೂ, ಮಧುಪರ್ಕ, ರುಚಿಕರ ಹಣ್ಣು ಹಂಪಲುಗಳನ್ನು ಸಂಗ್ರಹಿಸಿದ್ದಳು.

8.  ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?--ಶಬರಿ.

9.  ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?--ಧನು (ಕಬಂಧ).

10. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?--ಶಬರಿ.

11.  ಶಬರಿಗೀತನಾಟಕದ ಕರ್ತೃಯಾರು?--ಪು.ತಿ. ನರಸಿಂಹಾಚಾರ್ಯ

12. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರು ಏನು?-- ವೂಲವರ್ಥ  

13. ನೆಲ್ಸನ್‍ರವರ ಮೂರ್ತಿಯಿರುವ ಸ್ಥಳದ ಹೆಸರು ಏನು?-- ಟ್ರಾಫಲ್ಗಾರ್ ಸ್ಕ್ವೇರ್ (Trafalgar Square)

14. ‘ವೆಸ್ಟ್ ಮಿನ್‍ಸ್ಟರ್ ಅಬೆ’ ಯಾರ ಸ್ಮಾರಕವಾಗಿದೆ?— ದಿವಂಗತರಾದ ಸಂತರ, ಸಾರ್ವಭೌಮರ, ಕವಿಪುಂಗವರ ಸ್ಮಾರಕವಾಗಿದೆ.

15. ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?— ‘ಚೇರಿಂಗ್ ಕ್ರಾಸ್’

16. ಟ್ರಾಮ್ ಬಸ್ಸುಗಳು ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆ ಏನು?--ಭೂಗರ್ಭದಲ್ಲಿ ಗಾಡಿಗಳನ್ನು ಓಡಾಡುವಂತೆ ವ್ಯವಸ್ಥೆ ಮಾಡಲಾಗಿದೆ. 

17. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು? -- ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ ಕಂಕಣಬದ್ಧರಾದರು.

18. ಏಷ್ಯ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು?—ಯಾವುದೆಂದರೆ ಶಿವನ ಸಮುದ್ರದ ಕಾವೇರಿ ನದಿಯ ಬಳಿಯಲ್ಲಿ ಸ್ಥಾಪಿಸಿದ ಜಲವಿದ್ಯುತ್ ಯೋಜನೆಯಾಗಿದೆ.

19. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು?-- ಸರ್ ಪದವಿ ಪದವಿಯನ್ನು ನೀಡಿ ಗೌರವಿಸಿತು.

20. ವೆಂಕಟಲಕ್ಷ್ಮಮ್ಮ ಅವರು ತಮ್ಮ ಕುಟುಂಬವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದು ಏಕೆ?--ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾಗಬೇಕೆಂಬ ಹಂಬಲದಿಂದ

21. ವಿಶ್ವೇಶ್ವರಯ್ಯಯವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?--ಎಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ.

22. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು? --ನಾಲ್ವಡಿ ಕೃಷ್ಣರಾಜ ಒಡೆಯರು

23.  ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?--  ಕ್ರಿ.ಶ 1895ರಲ್ಲಿ ಪಟ್ಟಾಭಿಷಿಕ್ತರಾದರು

24. ವಿಶ್ವೇಶ್ವರಯ್ಯನವರ ಪೂರ್ವಜರ ಸ್ಥಳ ಯಾವುದು?--(ಆಂಧ್ರದ ಕರ್ನೂಲು ಜಿಲ್ಲೆಯ ಗಿಡ್ಡಲೂರು ತಾಲೂಕಿನ) ‘ಮೋಕ್ಷಗುಂಡಂ’ ಅಗ್ರಹಾರ

25. ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವವು?--ಎಂದರೆ ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ.

26. ಮನೆ ಮಂಚಮ್ಮ ಯಾರು?--ಕತೆಯಲ್ಲಿನ ಗ್ರಾಮದೇವತೆ.

27. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?--ಸಿದ್ದಲಿಂಗಯ್ಯ.

28. ಶಿವಾನುಭವ ಶಬ್ದಕೋಶ ಬರೆದವರು ಯಾರು?--ಫ.ಗು.ಹಳಕಟ್ಟಿ.

29. ವಚನಕಾರರಿಗೆ ಯಾವುದು ದೇವರಾಗಿತ್ತು?--ಅವರ ಪ್ರಜ್ಞೆಯೇ ದೇವರಾಗಿತ್ತು.

30. ಅಶೋಕ ಪೈ ಅವರ ವೃತ್ತಿ ಯಾವುದು?--ಮನೋವೈದ್ಯರು.

31. ದೇವನೂರರ ಪ್ರಕಾರ ದೇವರು ಯಾರು? (ದೇವನೂರರ ‘ನನ್ನ ದೇವರು’ ಯಾರೆಂಬುದನ್ನು ಸ್ಪಷ್ಟೀಕರಿಸಿ.) --ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯದ ಸಮತೆಯ ಬುದ್ದನನ್ನು ಇಟ್ಟರೆ ಅದೇ ಅವರ ದೇವರು. 

32. ‘ಮಲೆಗಳಲ್ಲಿ ಮದುಮಗಳು’ ಯಾರು ಬರೆದ ಕಾದಂಬರಿ?--ಕುವೆಂಪುರವರು ಬರೆದ ಕಾದಂಬರಿ.

33. ಭಗವದ್ಗೀತೆಯನ್ನು ರಚಿಸಿದವರು ಯಾರು?--ಮಹರ್ಷಿ ವೇದವ್ಯಾಸರು.

34. ಹುಲಿಗೆ ಪರಮಾನಂದವಾಗಲು ಕಾರಣವೇನು?-ಶಾನುಬೋಗರ ದುಂಡು ದುಂಡಾದ ಶರೀರವನ್ನು ನೋಡಿದ್ದು.

35. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?--ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳುವಂತೆ ಮಾಡಿದ ದೊಂಬರಾಟ.

36. ಶಾನುಭೋಗರಿಗೆ ಬ್ರಹ್ಮಾಸ್ತ್ರ ಯಾವುದು?-- ಖಿರ್ದಿಪುಸ್ತಕ.

37. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?--ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.

38. ‘ವೃಕ್ಷ ಸಾಕ್ಷಿ’ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?-- ದುರ್ಗಸಿಂಹನ ಕರ್ನಾಟಕ ಪಂಚತಂತ್ರ ಕೃತಿಯಿಂದ ಆರಿಸಲಾಗಿದೆ.

39. ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?--ಹೊನ್ನಿನ ಕಳ್ಳತನದ ಆರೋಪವನ್ನು ಹೊರಿಸಿದನು.

40. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?--ಏಕೆಂದರೆ ಧರ್ಮಬುದ್ಧಿಯು ಕದ್ದಿರುವದಕ್ಕೆ ಆಲದ ಮರವೇ ಸಾಕ್ಷಿ ಎಂದು ಹೇಳಿದುದರಿಂದ.

41. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?-- ದೇವರು, ಗುರುಗಳು, ವೇದಾಧ್ಯಯನ ನಿರತರನ್ನು ಪೂಜೆ ಮಾಡುತ್ತ ಕಳೆದನು.

42. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?-- ದುಷ್ಟಬುದ್ಧಿ ಮತ್ತು ಧರ್ಮಬುದ್ದಿಯ ನಡುವಿನ ವ್ಯಾಜ್ಯವನ್ನು ಪರಿಹರಿಸಲು ಬಂದರು.

43. ಸುಕುಮಾರಸ್ವಾಮಿಯ ತಂದೆತಾಯಿಯಗಳ ಹೆಸರು ಏನು?--ಸೂರದತ್ತ ಮತ್ತು ಯಶೋಭದ್ರೆ.

44. ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?-- ಸೆಟ್ಟಿಯ ಪಟ್ಟವನ್ನು ಕಟ್ಟಲಾಯಿತು.

45. ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?-- ಸುಕುಮಾರ ಸ್ವಾಮಿಯು ಯಾವಾಗ ಋಷಿಗಳನ್ನು ಕಾಣುತ್ತಾನೆಯೋ ಅಂದು ತಪಸ್ಸಿಗೆ ಹೊರಡುತ್ತಾನೆ ಎಂದು.

(ಗದ್ಯಭಾಗಕ್ಕೆ ಸೀಮಿತವಾಗಿರುವ 26 ಅಂಕಗಳಲ್ಲಿ 5 ಅಂಕಗಳನ್ನು ಸುಲಭವಾಗಿ ಗಳಿಸಿರಿ.)

ಮರೆಮಾಡಲಾಗದು



ಮರೆಮಾಚಿಸುತಿಹವು ನಿಜರೂಪಗಳನು ಮುಖವಾಡಗಳು
ಮರೆಸುತಿಹವು ನಿಜ ಸಂಬಂಧಗಳ ಸಹಜ ಒಡನಾಟವನು 
ಮೆರೆಯುತಿಹವು ಅಸಹಜತೆಯೇ ಸಹಜತೆಯೆಂದು ಭ್ರಮಿಸಿ
ಮರೆಮಾಡಲಾಗದೆಂದಿಗೂ ಸಹಜ ಗುಣಗಳ-ನನಕಂದ||